ಹಾಯ್, ಹಲೋ … ಓದುಗರಿಗೆ ನಮಸ್ಕಾರಗಳು . ಇಷ್ಟು ದಿನಗಳ ಕಾಲ ನನ್ನ ಬರವಣಿಗೆಗಳನ್ನು , ಓದಿ ಬೆಂಬಲ ಕೊಟ್ಟವರಿಗೆ ನನ್ನ ಧನ್ಯವಾದಾಗಳು. ಇನ್ಮುಂದೆ ನಾನು ಮತ್ತು ನನ್ನ ಸಹೋದರಿ, ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿಸ್ಮಯ ರೆಡ್ಡಿ ಸೇರಿ ಬರವಣಿಗೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ, ನಿಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಯಸುತ್ತಾ ನಿಮ್ಮವ – ತೇಜಸ್ ರೆಡ್ಡಿ Welcome to the club dude @vismaya26cdg

ಸೇಡಿನ ಪಯಣ …. ಸಂಡೂರಿನೆಡೆ

13 ನೇ ಆಗಸ್ಟ್ , ಮುಂಜಾನೆ 6:30 ಸುಮಾರು , ನನ್ನ ಸಹೋದರಿ ತನ್ನ ಪ್ರವಾಸದ ಚಿತ್ರ ವಾಟ್ಸಪ್ ಮುಖಾಂತರ ಕಳಿಸಿದಳು. ಇಬ್ಬರ ನಡುವೆ ಆನ್ಲೈನ್ ಅಸೂಯೆ ಶುರುವಾಯಿತು. ಆ ಅಸೂಯೆಯಿಂದ ಕೂಡಿಬಂದ ಆಸೆಯೇ ಈ ಸಂಡೂರಿನ ಪಯಣ. 1 ಪಯಣಿಗ , 2 ಚಕ್ರಗಳ ವಾಹನ , 3 ನಿಲ್ದಾಣಗಳು , 4 ಚಿತ್ರಗಳಿಂದ ಹುಟ್ಟಿದ ಅಸೂಯೆ , 50 ನಿಮಿಷಗಳ ಪ್ರಯಾಣ ಮತ್ತು 60 ಕಿ.ಮೀ ನ ಅಂತರ. ಸುತ್ತಲೂ ಅರಣ್ಯ , ಹಸಿರುContinue reading “ಸೇಡಿನ ಪಯಣ …. ಸಂಡೂರಿನೆಡೆ”

ಋಣ:

ಕೂಗಿ ಕೂಗಿ ಕರೆದೆ ನೀ ನನ್ನ ಇಂದು, ಕಾರಣಗಳಿಂದ ಇಲ್ಲಿಯೇ ಉಳಿದುಕೊಂಡೆ ನಾನು. ಬಿಡದೇ ಕಾಡುತ್ತಿದ್ದೆ ನೀ ಎಂದೆಂದೂ, ಬಿಡಲಾದರೂ ಬಿಟ್ಟೆನು ನೊಂದು. ತಪ್ಪದೇ ಬರುವೆ ನಾನಂದು, ತೀರಿಸಿಯೇ ಬಿಡುವೆ ನನ್ನ ಮೇಲೆ ಇರುವ ಆ ಋಣ ‘ವ ಎಂದೆಂದೂ …………………😇 ಇಂತಿ ನನ್ನ …..ನೀ ಯಾರೋ…….

ಕುರುಮರದಿಕೆರೆಯಲ್ಲಿ ಕುಟುಂಬ 😍

ಮನೆಯಲ್ಲಿ ಕೂತು ಎಲ್ಲರಿಗೂ ಬೇಸರ ಹೊರಗಡೆ ಹೋಗಲು ಎಲ್ಲರಲ್ಲೂ ಕಾತುರ ಅದೋ ಹೊರಟೆವು ನೋಡಲು ಪ್ರಕೃತಿಯ ಆ ಸುಂದರ ……… ಕೋರೋನದ ಕಂಟಕದಿಂದ ಮನೆಯಲ್ಲಿಯೇ ಸಮಯ ಕಳೆದು ಬೇಸರಗೊಂಡು , ಒಂದು ಚಿಕ್ಕ ಪ್ರವಾಸ ಮಾಡಲು ನಿರ್ಧರಿಸಿದರು . ಮಳೆಗಾಲದ ಸಮಯ , ಮುಂಜಾನೆ ೫ ಕ್ಕೆ ಚಿತ್ರದುರ್ಗದ ಊಟಿ ಎಂದೇ ಪ್ರಸಿದ್ಧವಾಗಿರುವ ‘ ಕುರುಮರದಿಕೆರೆ’ಗೆ ಹೊರಟೆವು . ೧೬ ° ತಾಪಮಾನ , ಸುತ್ತಲೂ ಹಸಿರು ಕವಿದ ವಾತಾವರಣ. ನಡೆಯಲಾಗದ ಕಲ್ಲು- ಬಂಡೆಗಳಿಂದ ಕೂಡಿದ ಹಾದಿ,Continue reading “ಕುರುಮರದಿಕೆರೆಯಲ್ಲಿ ಕುಟುಂಬ 😍”

ಅಂದಿನ ಮೌನ ಮಾತಾದಾಗ………

ತಯಾರಿ.., ಬಿ.ಎ.ಎಂ.ಎಸ್. ೨ನೇ ಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಕುತೂಹಲದ ಪ್ರವಾಸ. ಔಷಧ ಸಸಿಗಳನ್ನು ನೋಡುವ ನೆಪ ಹಿಡಿದು ೩ ದಿನಗಳ ಕಾಲ ಸುತ್ತಾಡುವ ಚಿಂತನೆಯಲ್ಲಿ ಇರುತ್ತಾರೆ. ನಮ್ಮ ಉದ್ದೇಶವು ಅದೇ ಇತ್ತು. ೨ ನೇ ಹಂತದ ತರಗತಿಗಳು ಪ್ರಾರಂಭವಾಗುತ್ತಿದ್ದಂತೆಯೇ , ಅದರ ಬಗ್ಗೆ ಕುತೂಹಲದಿಂದಿದ್ದೆವು. ಅತಿ ಆಸೆ ಗತಿಗೇಡು ಎಂಬಂತೆ , ತರಗತಿ ಶಿಕ್ಷಕರಿಗೆ ಎಷ್ಟೇ ವಿನಂತಿಸಿದರು ಅವರ ಮನಸ್ಸು ಒಗ್ಗಲಿಲ್ಲ. ಎಲ್ಲರೂ ಅದರ ಆಸೆ ಬಿಟ್ಟಿದ್ದರು. ಹಠಾತ್ತಾಗಿ ಒಂದು ದಿನ ವಿದ್ಯಾರ್ಥಿಗಳಿಗೆContinue reading “ಅಂದಿನ ಮೌನ ಮಾತಾದಾಗ………”

ಅಧ್ಯಾಯ -೨_ಶಿರಸಿ

ಬೆಳಗಿನಜಾವ ೬ ಗಂಟೆ ಸುಮಾರು . ಬಲಹೀನ ಹಾಗು ನಿದ್ರೆ ಇಲ್ಲದ 😴 ಮುಖಗಳನ್ನು ಶಿರಸಿಯ ಹಸಿರು ಸೊಬಗು ಆಹ್ವಾನಿಸಿತು. ತಯಾರಾಗಿ ಬರಲು ೨ ಗಂಟೆಗಳ ಕಾಲ ಸಮಯ ದೊರಕಿತ್ತು. ನಮ್ಮ ಆಚಾರಗಳಿಂದ ಬಂದಂತೆ , ಮೊದಲನೆಯದಾಗಿ ದೇವರ ದರ್ಶನ ಪಡೆಯಬೇಕು. ಅದರಂತೆಯೇ ಶಿರಸಿಯ ಮಾರಿಕಾಂಬಾ ದೇವಿಯ ದೇಗುಲಕ್ಕೆ ಹೊರಟಿದೆವು. ಮನಸ್ಸಿನಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು , ಭಕ್ತಿಯ ಮುಖವಾಡಗಳನ್ನು ಧರಿಸಿ ದೇವಿಯ ದರ್ಶನ ಪಡೆದರು. ೬೦ ಮಂದಿಗೆ ಒಮ್ಮೆಲೇ ಕೂರಲು ಯಾವುದೇ ಹೋಟೆಲುಗಳಲ್ಲಿ ಸಾಮರ್ಥ್ಯವಿರದContinue reading “ಅಧ್ಯಾಯ -೨_ಶಿರಸಿ”

ಅಧ್ಯಾಯ -೩_ದಾಂಡೇಲಿ

ಶಿರಸಿ ಇಂದ ದಾಂಡೇಲಿಯತ್ತ ನಮ್ಮ ಪಯಣ ಸಾಗಿತು . ಸಂಜೆ ೫ ರ ನಂತರ ಅರಣ್ಯ ಮಾರ್ಗವಾಗಿ ಪ್ರಯಾಣಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅನುಮತಿ ನೀಡಲಿಲ್ಲ. ಆದ್ದರಿಂದ ೪೦ ಕಿ. ಮೇ. ಹೆಚ್ಚುವರಿ ಮಾರ್ಗದಲ್ಲಿ ಸಂಚರಿಸಿ , ದಾಂಡೇಲಿ ತಲುಪಬೇಕಿತ್ತು. ನಮ್ಮ ಸ್ನೇಹಿತನ ಹುಟ್ಟು ಹಬ್ಬ ಆಚರಿಸಲೆಂದು ತಯಾರಿ ಮಾಡಲು ಒಂದು ವಾಹನ ಹಿಂದೆ ಉಳಿದಿತ್ತು . ಎಲ್ಲರೂ ಗಾಬರಿಗೊಂಡು ವಾಹನದಲ್ಲಿ ಶಿಕ್ಷಕರೇ ಇಲ್ಲವೆಂದು ಹಬ್ಬಿಸಿದರು. ಶಿಕ್ಷಕರಿಗಾಗಿ ಹುಡುಕಾಟ ನಡೆಸಿದೆವು. ನಂತರ ಗಾಬರಿಯಾಗಬೇಡಿ ಅವರು ಇಲ್ಲೇ ಇದ್ದಾರೆContinue reading “ಅಧ್ಯಾಯ -೩_ದಾಂಡೇಲಿ”

ಅಧ್ಯಾಯ-೩_ಬೆಳಗಾವಿ

ಪ್ರವಾಸದ ಕೊನೆಯ ದಿನ , ಕೊಠಡಿಗಳಲ್ಲಿ ಹಾಡು ಹಾಗೂ ಅಲಾರ್ಮಗಳ ಸದ್ದಿನ ರಣ ಕೇಕೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ತಯಾರಿಗೊಂಡು ಅಲ್ಪಹಾರ ಸೇವಿಸಿ ತಿಳಿಯದ ಗಮ್ಯವನ್ನು ಹುಡುಕುತ್ತಾ ಹೊರಟೆವು. ಒಂದು ಅದ್ಭುತವಾದ ಪ್ರವಾಸ ಸ್ಥಳಕ್ಕೆ ಕರೆದೊಯ್ಯುತ್ತಾರೆ ಎಂಬ ಉತ್ಸಾಹ , ಕಾತುರತೆಯಿಂದ ಹೊರಟೆವು , ಆಸೆಗಳು ನುಚ್ಚು ನೂರಾದವು . ಯಾವುದೋ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ , ಅರಣ್ಯದಲ್ಲಿ ಅಲೆಮಾರಿಗಳಂತೆ ಎಲೆಗಳನ್ನು ಕೀಳುತ್ತಾ ಸಮಯ ವ್ಯರ್ಥ ಮಾಡಿಸಿದರು . ಸುಮಾರು ೩ ಗಂಟೆಗಳ ಅವಧಿ ವ್ಯರ್ಥವಾಯಿತು.Continue reading “ಅಧ್ಯಾಯ-೩_ಬೆಳಗಾವಿ”

ಕನಸಿನ ಚಾರಣ….ವ್ಯರ್ಥವಾದ ಭಾಗ

ಸುತ್ತಲೂ ಪುಸ್ತಕ , ಕಾಗದ , ಲೇಖನಿಗಳಿಂದ ಸುತ್ತುವರಿದ ವಾತಾವರಣ. ಯಾರಿಗೂ ತಿಳಿಯದಂತೆ ಕದ್ದು ಓದುತಿದ್ದ ವಿದ್ಯಾರ್ಥಿಗಳಿಂದ ಆವರಿಸಿದ ವಸತಿ ನಿಲಯ. ಸಮಯ ಅರಿವಾಗದೇ ಕಳೆಯುತ್ತಿದ್ದ ಸಮಯ. ಅರಿವಾಗದೇ ಮುಗಿದ ಪರೀಕ್ಷೆಗಳು. ಪ್ರವಾಸ ತೆರಳಿ ಸುಮಾರು ದಿನಗಳಾಗಿತ್ತು , ಪರೀಕ್ಷೆ ಮುಗಿಸಿದ ಖುಷಿಯಲ್ಲಿ, ಅದೇ ವೇಗದಲ್ಲಿ ಸ್ನೇಹಿತರೊಂದಿಗೆ ಹೊರಟ ಆ ಪಯಣ ರೋಮಾಂಚಕ ತಿರುವುಗಳನ್ನು ಕಂಡಿತು . ನಾವು ಹೊರಟದ್ದು ಒಂದು ಜಾಗ , ತಲುಪಿದ್ದು ಇನ್ನೊಂದು, ನಂತರ ತಿರುವು ನೀಡಿದ್ದು ಯಾವುದೋ ಕಡೆಗೆ. ಮೊದಲಿಗೆ ಹುಬ್ಬಳ್ಳಿಯತ್ತContinue reading “ಕನಸಿನ ಚಾರಣ….ವ್ಯರ್ಥವಾದ ಭಾಗ”

Coffee land of Karnataka – CHIKMAGALUR

Chikamagalur is a land of coffee & hill station in Karnataka. City attracts tourists for its western ghats All this happened with a small talk with my friend. About any trip , the first place told was Chikmagalur. Started our journey from davangere by train , a journey of 2 hours took a destination BIRUR.Continue reading “Coffee land of Karnataka – CHIKMAGALUR”

A small trek – JOGI MATTI

Jogimatti is a hill station and forest reserve in Chitradurga district, Karnataka, India. The reserve covers 10,048.97 hectares (38.7993 sq mi) in Chitradurga, Holalkere and Hiriyur taluks, 10 kilometres (6.2 mi) south of the city of Chitradurga. There is a century-old hilltop bungalow built by the British to house travellers, and a nearby temple dedicated to the local saintfor whom the hill station was named,Continue reading “A small trek – JOGI MATTI”

AGADI THOTA

AGADI THOTA is a one day hangout package. With an entry fee costs around 500 rupees , including tiffin , Breakfast, juices , lunch & evening snacks with all activities & entertainment. Location – Agadi ThotaTadas – Hangal Road, Shiggaon Taluk, Kunnur, Karnataka 581193078995 81866https://maps.app.goo.gl/Hneaj4TNUhTAtxuWA Way to go – many ways to reach that destinationContinue reading “AGADI THOTA”

Design a site like this with WordPress.com
Get started