ದುರ್ಗಾಸ್ತಮಾನ

ದುರ್ಗದ  ದೈತ್ಯ ದಂತಕಥೆ – ೮

ಈ ಸರಣಿಯ ಕೊನೆಯ ಪುಸ್ತಕ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ-

ಚಿತ್ರದುರ್ಗ ಕೋಟೆಯ ಪ್ರವೇಶ ದ್ವಾರ.

ತ ರಾ ಸು ಅವರಿಗೆ ೬೫೦+ ಪುಟಗಳಷ್ಟು ಸಮೃದ್ಧವಾದ ಶ್ರೀಮಂತ  ಕಾದಂಬರಿಯ ಹೆಣೆಯುವಿಕೆ, ಓದುಗನನ್ನು ಇಂಚಿಂಚಿಗೂ ತಲುಪುವ ಸೃಜನಶೀಲತೆ  ದೈವದತ್ತವಾಗಿ ಒಲಿದ ಕಲೆ. ದುರ್ಗದ  ಹಿರಿಮೆ, ಉನ್ನತಿ, ಅವನತಿಯವರೆಗೂ  ಎಳೆಎಳೆಯಾಗಿ ಬಿಚ್ಚಿಟ್ಟಿದರೆ.

ಇಲ್ಲಿ ಹಿಂದಿನ ಪುಸ್ತಕಗಳ ಆರಂಭದಂತೆ ಅರಸನ ಆಯ್ಕೆಯಿಂದಲೇ ಮೊದಲ್ಗೊಂಡಿದೆ. ಕಸ್ತೂರಿನಾಯಕ ಸಂತಾನಹೀನರಾಗಿ ಮರಣ ಹೊಂದಿದ ನಂತರ ಅವರ ತಾಯಿ ಓಬವ್ವನಾಗತಿಯು ಹಾಗೂ ಆಡಳಿತವು ಸೇರಿ  ದುರ್ಗದ ಸಂಬಂಧಿಕರ ಮಗನಾದ ಮದಕರಿಯನ್ನು ಹೊಸ ಅರಸನ್ನಾಗಿ ಮಾಡಲು ನಿಶ್ಚಯಸುತ್ತಾರೆ. ಜನಕಲ್ಲು ದುರ್ಗದ 12 ವರ್ಷದ ಎಳೆಯನ ಪಟ್ಟಾಭಿಷೇಕದಿಂದ  ಶುರುವಾಗುವುದು ದುರ್ಗಾಸ್ತಮಾನ.

ಓಬವ್ವ ನಾಗತಿಯ ಜವಾಬ್ದಾರಿ,
ದುರ್ಗಕ್ಕಿಂತ ದೊಡ್ಡವರು ಯಾರು ಇಲ್ಲ ಎಂದು ಮಗನನ್ನು ದೂರ ಮಾಡಿಕೊಂಡ ಪ್ರಧಾನಿ ಕಳ್ಳಿ ನರಸಪ್ಪ ನಾಯಕರು,
ಜಿದ್ದಿನ ಬುದ್ಧಿಯ ನವಾಬ ಹೈದರಾಲಿ, ಅತ್ತಿತ್ತಾ ಹೊಯ್ದಾಡುವ ಮರಾಠರ  ಸೈನ್ಯ,
ಶತ್ರು ಸೈನ್ಯ ದೊಳಗೆ ಒಬ್ಬನೇ ನುಗ್ಗಿ ಆ ಗುಂಪಿನ ನಾಯಕನ ರುಂಡ ಕಡಿದು ತಂದ ವೀರಯೋಧ ಗುದಗತ್ತಿ.
ದುರ್ಗವನ್ನು ಕಾಪಾಡಿದ ರಣದುರ್ಗಿ ಓಬವ್ವ.  ಸೇಡು ತೀರಿಸಿಕೊಳ್ಳುಲೆ ಇರುವ ಮದಕರಿಯ ಖಾಸಾ ಬೇಡ ಪಡೆ,
ಕಡೂರಿ ಹಾಗೂ ನಗವ್ವನ ವ್ಯಮೋಹ,
ಒಂದು ವರ್ಷ ಸತತ ಸಮರದ ಸಮಯದಲ್ಲಿ ಸಾವಿನ ಗುಹೆಯಾದ ದುರ್ಗ,
ಪಂಜಾ ತೊಳೆಯಲು ಹೋಗಿ ನವಾಬನ ಪಿತೂರಿಗೂಳಗಾದ ಮುಸ್ಲಿಂ ಸರ್ದಾರರು, ರಾಜಸಹೇಬರನ್ನೇ ಖುದಾ ಎಂದು ನಮಾಜ್ ಮಾಡಿದ  ಸರ್ದಾರ್ ಖಾನ,
ಹಿಂದೂ-ಮುಸ್ಲಿಂ ಏಕ್ ಹೈ ಹೈದರ್ ಸಪ್ಕೋ ದುಷ್ಮನ್ ಹೈ ಎಂದು ಕೂಗುವ ದುರ್ಗದ ಜನತೆ,
ಹೊರಗಿನಿಂದ ಯುದ್ಧ ಮಾಡಿ ಗೆಲ್ಲಲು ಹೆಣಗುತ್ತಿದ್ದ ಹೈದರಾಲಿಗೆ ಒಳಗಿನಿಂದ ಕೋಟೆಯನ್ನು ಗೆಲ್ಲಿಸಿಕೊಟ್ಟ ದಿವಾನ ಪೂರ್ಣಯ್ಯ ಮತ್ತು ಬೇಹುಗಾರ ಅಬ್ದುಲ್ ಖಯಂ,
ಮಾದಕರಿಯ ಅಳಿವುವಾಗುವುದೆಂದು ಖಚಿತವಾದೊಡೆ ಅಕ್ಕತಂಗಿ ಹೊಂಡಕ್ಕೆ ಆಹುತಿಯಾದ  ಮುತೈದೆಯರು ಬಂಗಾರವ್ವ ಹಾಗೂ ಪದ್ಮವ್ವ.
ನಾಯಕನ ಕೊನೆವರೆಗೂ ಕೈಬಿಡದೆ ಜೊತೆಗಿದ್ದ ತಮ್ಮ ಪರಶುರಾಮಪ್ಪ,
ತುಂಬಿದ ದುರ್ಗದಲ್ಲಿ ಕಡೆಗೂ ಒಂಟಿಯಾದ ಮದಕರಿ ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟುವಂತಿದೆ.

ರಾಜನಾದವನ  ಮಾನಸಿಕ ಸ್ಥಿತಿ, ವೈಯಕ್ತಿಕ ಹಾಗು ಅವೈಯಕ್ತಿಕ  ವಿಷಯಗಳನ್ನು ತರಾಸುರವರು ಸನ್ನಿವೇಶ ಸಹಿತವಾಗಿ ವಿವರಿಸಿದ್ದಾರೆ.

ಇದೊಂದು ಸಾರ್ಥಕ ಓದಿನ ನಂತರ ಚಿತ್ರದುರ್ಗವೆಂದರೇ ಕೇವಲ ಕಲ್ಲಿನ ಕೋಟೆಯಲ್ಲ. ಅಲ್ಲಿ ಎಷ್ಟೋ ರಾಶಿ ರಾಶಿ ಕಥೆಗಳಿವೆ, ತ್ಯಾಗ ಬಲಿದಾನಗಳಿವೆ. ಪುಸ್ತಕದ ಕೊನೆಗೆ ಅದೊಂದು ಐತಿಹಾಸಿಕ ಪಾತ್ರ ವೀರ ಮದಕರಿಯ ಪರಕಾಯ ಪ್ರವೇಶವಾಗುತ್ತದೆ, ಅವನ ಒಂದೊಂದು ಏಟನ್ನು, ಬಿದ್ದ ಹನಿ ಹನಿ ರಕ್ತವನ್ನು, ಅಸಹಾಯಕತೆ, ಪ್ರೀತಿ, ಅಂತಃಕರಣಗಳನ್ನು ಓದುಗ ಅನುಭವಿಸಬಹುದು.”ಉತ್ಸವಾಂಬೆಗೆ ಜಯವಾಗಲಿ” ಎಂಬ ಘೋಷ ಕೇಳಿಬರುತ್ತದೆ.

ಇದು ನಮ್ಮ ಹೆಮ್ಮೆಯ ದುರ್ಗದ ದಂತಕಥೆ.. ಪ್ರಣಾಮಗಳು.

#durgastamana #swarganamdurga #fortcitychitradurga  #histroyinspires
#tarasu #knowyournative
#ka_16 #prouddurgans

ಕಸ್ತೂರಿ ಕಂಕಣ

ದುರ್ಗದ ದಂತಕಥೆ – ೭/೮

ಚಿತ್ರದುರ್ಗದ ಕೋಟೆ

ಕೊಲೆ, ಅಕಾಲಿಕ ಮರಣ ಅಥವಾ ರಾಜಕೀಯ ಅತಂತ್ರ ಪರಿಸ್ಥಿತಿಗಳನ್ನು ಬಿಟ್ಟು ಹೊಸದೊಂದು ವಿಷಯದ ಮೂಲಕ ಲೇಖಕರು ಓದುಗರಿಗೆ ಹೊಸತನವನ್ನು ನೀಡಿದ್ದಾರೆ. ಸೀರ್ಯದ ನಾಯಕರು ದುರ್ಗದ ನಾಯಕರ ಮಗಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಕಳಿಸುವ ರಾಜಸದೊಂದಿಗೆ ಶುರುವಾಗುವ ಕಥೆ ಸರ್ಜೇ ನಾಯಕರ ರೌದ್ರಾವತಾರದೊಂದಿಗೆ ಕೊನೆಗೊಳ್ಳುತ್ತದೆ.
ವಿವಾಹ ! ಎರಡು ಕುಟುಂಬಗಳನ್ನು, ಹಲವು ಮನಸುಗಳನ್ನು ಬೆಸೆಯುವ ಕಾರ್ಯ.  ರಾಜ ಮನೆತನಗಳ ವಿವಾಹ ಗಳೆಂದರೆ ಸ್ವಪ್ರತಿಷ್ಠೆ, ಒಳಸಂಚಿನ ರಾಜಕಾರಣಕ್ಕಾಗಿ ಕೆಲ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ‘ಕಸ್ತೂರಿ ಕಂಕಣ’ ದಲ್ಲಿಯೂ ಇಂತಹದೇ ಒಂದು ವಿವಾಹದ ಸೋಗಿನಲ್ಲಿ ನಡೆಯುವ ಕುಟಿಲ ರಾಜಕೀಯವಿದೆ!

ಇಲ್ಲಿ ತರೀಕೆರೆಯ ವೆಂಕಪ್ಪಯ್ಯನ ನೀಚ ರಾಜಕಾರಣ, ಹಿರಿಯೂರಿನ ಪಾಳೇಗಾರ ಕೆಂಚಣ್ಣ ನಾಯಕರ ನಿಷ್ಠೆ, ಕಸ್ತೂರಿ ರಂಗಪ್ಪ ನಾಯಕರ ಭ್ರಾತೃತ್ವ ,ದಳವಾಯಿ ಪ್ರಧಾನಿಗಳು ತರ್ಕಬದ್ಧವಾದ ಚಿಂತನೆ, ಸರ್ಜಾ ನಾಯಕರ ಬಿಸಿ ರಕ್ತವಿದೆ. ಈ ಎಲ್ಲಾ ಪಾತ್ರಗಳ ಬಗ್ಗೆ ೨೭೦+ ಪುಟಗಳನ್ನು ಒಂದೇ ಓದಿಗೆ ಮುಗಿಸುವಷ್ಟು ಸೊಗಸಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ.

ನಾಯಕರು ಹಿರಿಯೂರಿನ ಪಾಳೇಗಾರ ಕೆಂಚಣ್ಣನ ಹೆಂಡತಿಯನ್ನು ಸಹೋದರಿಯಂತೆ ಆಧರಿಸಿ ಕೊಟ್ಟ ಮಾತನ್ನು ನೆಡೆಸಿಯೇ ತೀರಬೇಕೆಂದು ಮಾಡುವ ಹೋರಾಟದ ಪರಿಯೇ ಕಸ್ತೂರಿ ಕಂಕಣವಾಗಿದೆ.
ಇನ್ನೂ ಈ ಸರಣಿಯ ಕೊನೆಯ ಮೇರು ಕೃತಿ ದೈತ್ಯ ದಂತಕಥೆ ದುರ್ಗಾಸ್ತಮಾನದೊಂದಿಗೆ ಮತ್ತೆ ಬರುತೇನೆ.

#swarganamdurga #fortcitychitradurga #kasturikankana #histroyinspires
#tarasu #knowyournative
#ka_16 #prouddurgans

ರಾಜ್ಯ ದಾಹ

ದುರ್ಗದ ದಂತಕಥೆ – ೬/೮

ಚಿತ್ರದುರ್ಗದ ಕೋಟೆ

ವಿಜಯೋತ್ಸವದ ಮೆಹೆರ್‌ಬಾನುವಿನಂತ ಒಂದು ಮಾಂತ್ರಿಕ ಪಾತ್ರದ ಬಗ್ಗೆ ಓದಲು ಈ ಪುಸ್ತಕ ಶುರುಮಾಡಿದಾಗ ಒಂದು ಅಚ್ಚರಿ ಕಾದ್ದಿತ್ತು.

ದುರ್ಗದ ಸರಣಿಯ ಆರನೇ ಪುಸ್ತಕವಿದು. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು ಮತ್ತು ವಿಜಯೋತ್ಸವ ಕಾದಂಬರಿಗಳೆಲ್ಲವೂ ಒಂದು ಮಾರ್ಗದಲ್ಲಿ ಚಲಿಸಿದರೆ. ರಾಜ್ಯದಾಹ ಭರಮಣ್ಣ ನಾಯಕನ ರಾಜ್ಯಾಡಳಿತದಲ್ಲಿ ಬರುವ ಆಂತರಿಕ ಕಲಹದ ಕುರಿತು ಇರಬಹುದು ಎಂದುಕೊಂಡು ಪುಸ್ತಕವನ್ನು ತೆರೆದಾಗ ತ.ರಾ.ಸು ಈಗಿನ ಸಿನಿಮಾ ಸಿಕ್ವೆಲ್ ಸಿನ್ಗಳಂತೆ ಕಂಬನಿಯ ಕುಯಿಲು ಮತ್ತು ರಕ್ತರಾತ್ರಿ ಪುಸ್ತಕಗಳ ನಡುವೆ ಒಂದು ಹೇಳಿರದ ಕಥೆಯನ್ನು ಇಲ್ಲಿ ನಿರೂಪಿಸಿದ್ದರು. ಪುಸ್ತಕದ ಆರಂಭ ಕಂಬನಿಯ ಕುಯಿಲಿನ ಅಂತ್ಯದಿಂದ ಶುರುವಾಗಿದೆ. ಮುದ್ದಣ್ಣ, ಗಿರಿಜೆ, ಕಸ್ತೂರಿ ನಾಯಕ, ವೀರನಾಯಕ, ದಳವಾಯಿ ದೇಸಣ್ಣ, ಭುವನಪ್ಪ ಮತ್ತು ಮುಂತಾದ ಪಾತ್ರಗಳು ಪುಸ್ತಕದಲ್ಲಿ ಮತ್ತೆ ಬರುವುದು ಮತ್ತೆ ಹಿಂದಿನ ಪುಸ್ತಕಗಳನ್ನು ಮೆಲುಕು ಹಾಕಿಸುವುದರಲ್ಲಿ ಸೋತಿಲ್ಲ. ಅದರಲ್ಲೂ ಗಿರಿಜೆಯ ಪಾತ್ರ ರಕ್ತರಾತ್ರಿ ಮತ್ತು ತಿರುಗುಬಾಣ ಕಾದಂಬರಿಯಲ್ಲಿ ಏಕೆ ಅಷ್ಟು ಉಗ್ರವಾಯಿತು ಎಂಬ ಪ್ರಶ್ನೆಗಳಿಗೂ ಉತ್ತರವಿದೆ.

ಮುದ್ದಣ್ಣನ ವರ್ತನೆಗೆ ಕೇವಲ ಅಧಿಕಾರದ ಆಸೆಬಾಕತನ ಒಂದೇ ಕಾರಣವಾಗಿರಲಿಲ್ಲ. ಬೇರೆ ಕಾರಣಗಳೂ ಇದ್ದವು. ಹೇಯಭಾವ ಮತ್ತಷ್ಟು ಹೆಚ್ಚಾಗಿ ಛೀ ಮುದ್ದಣ್ಣ ಎಂದು ಅನಿಸಲೂಬಹುದು. ರಕ್ತರಾತ್ರಿಯ ಆರಂಭದಲ್ಲೇ ಅಂತ್ಯವಾಗುವ ಚಿಕ್ಕಣ್ಣನಾಯಕನ ಆಳ್ವಿಕೆಯ ಬಗ್ಗೆ ಈ ಹಿಂದಿನ ಪುಸ್ತಕಗಳಲ್ಲಿರದ ವಿವರಣೆ ರಾಜ್ಯದಾಹದಲ್ಲಿದೆ.

ಕೇವಲ ೧೨೦ ಪುಟಗಳಿರುವ ಪುಸ್ತಕವು ಕಳೆದುಹೋಗಿದ್ದ ಕೊಂಡಿಯನ್ನು ಬೆಸೆದು ದುರ್ಗದ ಕಥೆಯನ್ನು ಇನ್ನಷ್ಟು ರೋಚಕವಾಗಿಸಿದೆ. ಹೇಳಲು ಹೆಚ್ಚು ಅವಕಾಶವನ್ನೂ ನೀಡದಷ್ಟು ಸೂಕ್ಷ್ಮವಾಗಿ ಕಥೆಯನ್ನು ಹೇಳಿದ್ದಾರೆ.

ಕಸ್ತೂರಿ ಕಂಕಣಕ್ಕೆ ಮತ್ತೆ ಸಿಗೋಣ.

#swarganamdurga #fortcitychitradurga #rajyadaha #histroyinspires
#tarasu #knowyournative
#ka_16 #prouddurgans

ವಿಜಯೋತ್ಸವ

ದುರ್ಗದ ದಂತಕಥೆ – ೫/೮

ಸಂಪಿಗೆಸಿದ್ದೇಶ್ವರ ದೇವಸ್ಥಾನ, ಚಿತ್ರದುರ್ಗದ ಕೋಟೆ.

ಹೊಸ ಹಗಲು ಮುಗಿಸಿದ ನಂತರದ ಮುರುಘಾ ರಾಜೇಂದ್ರಸ್ವಾಮಿಗಳು ಹೇಳುವ ಕಾಲಜ್ಞಾನದ ನುಡಿಗಳು ರಾಜ ಭರಮಣ್ಣ ನಾಯಕರನ್ನು ಅಣಜಿಯ ಯುದ್ಧದ ಫಲಿತಾಂಶಕ್ಕಿಂತ ಹೆಚ್ಚು ಚಿಂತೆಗೀಡು ಮಾಡುತ್ತದೆ.
ಯುದ್ಧ ಇನ್ಮುಂದೆ ಬೇಡವೆಂದು ಯೋಚನೆಯಲ್ಲಿರುವಾಗಲೇ ದೆಹಲಿಯ ದಿವಾನ್ ಖಾಸಿಂ ಖಾನ್‌ನ ವಕೀಲ ಜುಲ್ಫಿಕರ್ ಖಾನ್  ಸಿರಿಯಾದಿಂದ(ಇಂದಿನ ಸಿರಾ) ತರುವ ರಾಜಸದಲ್ಲಿ  ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂದು ಸೂಚಿಸಿರುತ್ತದೆ. ಪ್ರಧಾನಿ ಮತ್ತು ನಾಯಕರ ನಿರ್ಧಾರ ದುರ್ಗವನ್ನು ಶ್ರೀಮಂತವಾಗಿಸುವುದೋ, ಸಾಮಂತವಾಗಿಸುವುದೋ ಎಂಬುದನ್ನು ತಿಳಿಯಲು ಪುಸ್ತಕ ಓದಬೇಕು.
ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.

ನಾಯಕರ ಮನಸ್ಥಿತಿ ದುರ್ಬಲಗೊಳಿಸುವ ಉದ್ದೇಶದಿಂದ ಮೆಹರ್‌ಬಾನು ಎಂಬ ಮುಸ್ಲಿಂ ಗಾಯಕಿಗೆ ತನ್ನ ಪ್ರತಿಭೆಯನ್ನು ದುರ್ಗದ ನಾಯಕರಿಗೆ ಮೆಚ್ಚಿಸುವ ಗಾನಗೋಷ್ಠಿಗೆಂದು ಹೇಳಿ ಜುಲ್ಫಿಕರ್ ಖಾನ್ ನ ಜೊತೆ ಕಳುಹಿಸಿರುತ್ತರೆ.
ಮೆಹರ್‌ಬಾನುವಿನ ಅಂದದ ಬಗ್ಗೆ ಬರೆದಿರುವ ಸಾಲುಗಳು ಇದು ಯುದ್ಧದ ಕುರಿತಾದ ಪುಸ್ತಕವಾ ಎಂಬ ಪ್ರಶ್ನೆಗಳು ಮೂಡುತ್ತವೆ. ಆ ವರ್ಣನೆಗೆ ಮನಸೋಲದೆ ಯಾರು ಉಳಿಯುವುದಿಲ್ಲ, ಈ ಪುಸ್ತಕದ ಬಹುಮುಖ್ಯ ಪಾತ್ರ ಈಕೆಯದು.

ತ.ರಾ.ಸುರವರು ಬಾದಷಹ ಮತ್ತು ನಾಯಕರ ನಡುವಿನ ಮನಸ್ತಾಪವೆಂದ ಮೇಲೆ ಅಲ್ಲಿ ಬರುವ ಹಿಂದೂ ಮುಸ್ಲಿಂ ಗಲಭೆಗಳನ್ನು ಬೆಣ್ಣೆಯಿಂದ ಕೂದಲ ತೆಗೆದಷ್ಟೇ ಚಂದವಾಗಿ
ನಿರೂಪಿಸಿದ್ದಾರೆ.

ಯುದ್ಧ ನಾಯಕರು, ಬಾದಷಹರು, ಮರಾಠರು ಮತ್ತು ನಿಂಬಾಯ್ಕರರ ನಡುವೆ ನಡೆದರೂ ಇವರು ಯಾರು  ವಿಜಯೋತ್ಸವ ಆಚರಿಸುವುದಿಲ್ಲ.  ಇಲ್ಲಿ ಧರ್ಮ,ಸಹಿಷ್ಣುತೆ, ನಿಷ್ಕಲ್ಮಶ, ನಿಶ್ಚಲ, ಮಾನವತಾವಾದಗಳ ಗೆಲುವಾಗಿದೆ.
ಲೇಖಕರು ಕೇವಲ ಸಮರ ರಾಜಕೀಯದ ಕುರಿತು ಬರೆಯದೇ  ಪ್ರೀತಿ, ಜಾತಿ, ಮನುಷ್ಯತ್ವಳ ಬಗ್ಗೆಯೂ ಬರೆದಿರುವ ಈ ಪುಸ್ತಕವು ಈ ಹಿಂದಿನ ನಾಲ್ಕು ಪುಸ್ತಕಗಳಿಗಿಂತ ಹೆಚ್ಚು ಅಭಿಮಾನ ಗಳಿಸಿಕೊಳ್ಳುತ್ತದೆ.

#swarganamdurga #fortcitychitradurga  #vijayotsava #histroyinspires
#tarasu #knowyournative
#ka_16 #prouddurgans

ಹೊಸ ಹಗಲು

ದುರ್ಗದ ದಂತಕಥೆ- ೪/೮

ಉಯ್ಯಾಲೆ ಕಂಬ, ಚಿತ್ರದುರ್ಗ ಕೋಟೆ.

ಕತ್ತಲು ಶಾಶ್ವತವಲ್ಲ. ಇರುಳು ಮುಗಿದಮೇಲೆ “ಹೊಸಹಗಲು” ಮೂಡಲೇಬೇಕು.
ಮುದ್ದಣ್ಣನ ಸಂಪುಟ ಮುಗಿದ ಮೇಲಿನ ದುರ್ಗದ ಕಥೆ ಇಲ್ಲಿ ಮುಂದುವರಿದಿದೆ.
ಸಹಜವಾಗಿ ಎಲ್ಲಾ ಐತಿಹಾಸಿಕ ಕಥೆಗಳು ಹೀಗೆ ಇರುತ್ತವೆ ಕುಸಿದು ಮತ್ತೆ ಹುಟ್ಟುತ್ತವೆ, ಆ ಒಬ್ಬ ನಾಯಕನಿಂದ. ಅಂಥ ಒಬ್ಬ ಕುರುಬ ನಾಯಕನಾಗುವ  ಕನಸುಗಳಿಂದ ಶುರುವಾಗುವುದು ಹೊಸಹಗಲು,

ಈ ಹಿಂದಿನ ಮೂರು ಪುಸ್ತಕಗಳಲ್ಲೂ ಬರುವ ನಾಯಕರ ಆಯ್ಕೆ ಪ್ರಕ್ರಿಯೆ ಇಲ್ಲೂ ಮುಂದುವರೆದಿದೆ. ಮತ್ತಿವಂಶದ ಕಡೆಯ ಗಂಡು ಸಂತಾನವಾದ ರಂಗಪ್ಪನಾಯಕ ಬಂಧಿಯಾದ ಮೇಲೆ ಪುನಃ ಅವರನ್ನೇ ಪಟ್ಟಕ್ಕೆ ಕೂರಿಸಿದರೇ ಸಿಂಹಾಸನಕ್ಕೆ ಶೋಭೆ ಇರುವುದಿಲ್ಲ ಎಂದು ಅವರ ನೆಂಟರೇ ಆದ ಭರಮಪ್ಪನನ್ನು ನಾಯಕನಾಗಿ ಆರಿಸಲು ತೀರ್ಮಾನಿಸುತ್ತಾರೆ. ತರಾಸುರವರ ಕಲಾತ್ಮಕವಾಗಿ ಕಥೆ ಹೆಣೆದಿರುವ ಚಾತುರ್ಯ ಮುರುಘಾರಾಜೇಂದ್ರ ಸ್ವಾಮಿಗಳ ಆಗಮನವಾದಾಗ ತಿಳಿಯುತ್ತದೆ.

ಕುರುಬ ಭರಮಣ್ಣನು ಅವನ ಕನಸಿನಂತೆ ಪಾಳೆಯಗಾರ ಭರಮಪ್ಪನಾಯಕನಾದ ನಂತರ ರಂಗಪ್ಪನಾಯಕ ಕಹಿ ಮಾತಿಗೆ ಕುಗ್ಗುತ್ತಾನೆ. ಕುಗ್ಗುವುದು ಹಿಗ್ಗುವುದರ ಮೊದಲ ಸಂಕೇತವೆನ್ನುವಂತೆ ಭರಮಪ್ಪನಾಯಕ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸಿ “ಹಾಲಿನಲ್ಲಿ ಕೈ ತೊಳೆಯುವ” ಸಮೃದ್ಧ ಸಾಮ್ರಾಜ್ಯವನ್ನು ಕಟ್ಟಲು ಎಲ್ಲ ರೀತಿಯ ಸಿದ್ಧತೆಗಳು ಶುರುವಾಗುತ್ತವೆ. ಜನರ ಆಶೀರ್ವಾದಗಳೂ ಕೂಡ ದೊರೆಯುತ್ತವೆ.

ಬೆಳೆಯುವ ಸಾಮ್ರಾಜ್ಯವನ್ನು ತುಳಿಯಲೊಂದು ವೈರಿಬಣವೂ ಇರಬೇಕಲ್ಲವೇ. ರಂಗಪ್ಪನಾಯಕನ ತವರಾದ ಹರಪನಹಳ್ಳಿಯ ಬಸವಂತನಾಯಕನು ದುರ್ಗದ ಮೇಲೆ ಕಣ್ಣಿಡುತ್ತಾನೆ. ದುರ್ಗದ ಅಭಿವೃದ್ಧಿಯಲ್ಲಿ ಬಂದ ಆರ್ಥಿಕ ತೊಡಕುಗಳನ್ನು ಉಪಯೋಗಿಸಿಕೊಳ್ಳಲು, ದುರ್ಗದವರನ್ನೇ ಬಳಸಿಕೊಂಡು ದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಕೆಳದಿಯವರ ಬೆಂಬಲದಿಂದ ಅಣಜಿಯನ್ನು ವಶಪಡಿಸಿಕೊಳ್ಳುವುದು ಹರಪನಹಳ್ಳಿಯವರ ಮೊದಲ ಗೆಲುವು ಹಾಗೂ ಅದು ಭರಮಪ್ಪನಾಯಕನ ಮೊದಲ ಯುದ್ಧ ಮತ್ತು ಮೊದಲ ಸೋಲು. ಆ ಸೋಲಿನಿಂದ ಭರಮಪ್ಪನಾಯಕ ಕುಗ್ಗುತ್ತಾನೆ. ಅಭಿವೃದ್ಧಿ ಕುಂಠಿತವಾಗುತ್ತದೆ. ಅಲ್ಲಿಂದಾಚೆಗೆ ಕಾದಂಬರಿಯು ಇನ್ನೊಂದು ರೂಪವನ್ನೇ ಪಡೆದುಕೊಳ್ಳುತ್ತದೆ. ಈ ಪುಸ್ತಕವು ಕತ್ತಿ ಮಸೆಯುವುದಕ್ಕಿಂತ ಬದುಕಿನ ಸತ್ಯಗಳು, ಕನಸು, ಸ್ವಾಮಿನಿಷ್ಠೆ, ರಾಜ್ಯಾಡಳಿತ, ಅಭಿವೃದ್ಧಿಯ ಕುರಿತು ಮಾತನಾಡುತ್ತದೆ. ಅಣಜಿ  ಕೋಟೆಯನ್ನು ಮತ್ತೆ ವಶಪಡಿಸಿಕೊಂಡ ದುರ್ಗದ ಸಮರೊತ್ಸಹವನ್ನು ತರಾಸು ರವರು ವಿವರಿಸುವ ಬಗೆ ಮೈ ಜುಮ್ಮೆನಿಸುತ್ತದೆ.

ಮುಂದೆ ಭರಮಪ್ಪನಾಯಕನ ದುರ್ಗದ ವಿರುದ್ಧ ಬಸವಂತನಾಯಕನ ಯುದ್ಧ, ಆಂತರಿಕ ಬಿಕ್ಕಟ್ಟು ಮತ್ತು ಮುರುಘಾರಾಜೇಂದ್ರಸ್ವಾಮಿಗಳ ಭವಿಷ್ಯವಾಣಿ  ಇವುಗಳ ವಿಸ್ತಾರ “ವಿಜಯೋತ್ಸವ” ದಲ್ಲಿ ತಿಳಿಯೋಣ.

#swarganamdurga #fortcitychitradurga #raktharatri #histroyinspires
#tarasu #knowyournative
#ka_16 #prouddurgans

ತಿರುಗು ಬಾಣ

ದುರ್ಗದ ದಂತಕಥೆ-೩/೮

ಬಂದಿಖಾನೆ,ಚಿತ್ರದುರ್ಗ ಕೋಟೆ.

“ದುರ್ಗದ ಸರ್ವಾಧಿಕಾರಿ ಮುದ್ದಣ್ಣ” ಕೇಳಿದರೆ ರೋಷ ಉಕ್ಕುತದೆ.

ನೊಂದ ಹೆಣ್ಣು ಗಿರಿಜವ್ವೆ, ಅನಾಥ ಪುತ್ರರು, ದಿಕ್ಕಿಲ್ಲದ ಹಳ್ಳಿಗರು, ರೋಸತ್ತ ಸೈನಿಕರು ಒಂದಾಗಿ ಹೆಣೆದ ಮಹಾ ಸಂಚಿಗೆ, ಬಲಿಪಶುಗಳಾದ ರಾಜದ್ರೋಹಿ, ಅಧರ್ಮಿ, ರಕ್ತಪಿಪಾಸು, ಮುದ್ದಣ್ಣ ಮತ್ತು ಸಂಗಡಿಗರ ರೋಚಕ ಕಹಾನಿ,’ತಿರುಗುಬಾಣ’.

ಪಂಜು ಉರಿದಷ್ಟು ಹಿಡಿಕೆ ಸುಡುತ್ತದೆ. ದುರ್ಗದ ಜನತೆ ಗಿರಿಜವ್ವಯ ಕ್ರೋಧಕ್ಕೆ, ಮತ್ತಿವಂಶದವರ ಮೇಲೆ ನಡೆದ ದೌರ್ಜನ್ಯಕ್ಕೆ, ಸಾಮಾನ್ಯರ ಮೇಲಿನ ಶೋಷಣೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಥೆಯ ಒಂದು ಭಾಗವಾದರೇ,ಪರಶುರಾಮಪ್ಪ ಮತ್ತು ಭರಮಣ್ಣ ಅವರ ರಾಜತಾಂತ್ರಿಕತೆಯೇ ಇನ್ನೊಂದು ಭಾಗ.

ಮುದ್ದಣ್ಣನ ಅಹಂಕಾರ ದಿನೇ ದಿನೇ ಹೆಚ್ಚಾಗತೊಡಗಿದಾಗ
ಆ ಹೆಣ್ಣು ಗಿರಿಜವ್ವ, ಹಗಲು ರಾತ್ರಿ ಎನ್ನದೆ, ಸೇಡು ತೀರಿಸಿಕೊಳ್ಳಲು, ಕಾಡು ಮೇಡು ಅಲೆದು ಸಂಚು ಹಾಕಿ ಊರೂರು ತಿರುಗಿ ಗೌಡ್ರುಗಳನ್ನೆಲ್ಲ, ಮುದ್ದಣನ ವಿರುದ್ಧ ಎತ್ತಿ ಕಟ್ಟುವ ಆಕೆಗೆ ಸಹಾಯ ಮಾಡೋದು ನಮ್ಮ ಧರ್ಮ ಎಂದು ಪುಟ ಪುಟ ಗಳಲ್ಲೂ ಧೈರ್ಯ ಮೆರೆದ ಹಳ್ಳಿಗರು, ಸ್ವಾಮಿ ನಿಷ್ಠೆ ಮೆರೆದ ಪರುಶುರಾಮಪ್ಪ, ದಳವಾಯಿ ಭರಮಣ್ಣ ಮತ್ತು  ಋಣ ತೀರಿಸಲು ಕೆಲ ಸೈನಿಕರು ಮುದ್ದಣ್ಣನ ಅಮಿತ ಅಹಂಕಾರ ವಧೆ ಮಾಡುವ ಸಂಭಾಷಣೆಗಳೆಲ್ಲ ಕಣ್ಣ ಮುಂದೆ ಬಂದು ನಿಂತು, ಅವನ ವಿರುದ್ಧ  ಕೇಕೆ ಹಾಕುತ್ತಾ ಅಣಕಿಸಿ ನಗುತ್ತವೆ.

ಅಂತೂ ಇಂತೂ , ಮೆರೆದವರೆಲ್ಲ ಮಣ್ಣಾದವರೆ ಎಂಬುದು ಸತ್ಯವಾದ ಮಾತು ಮುದ್ದಣ್ಣನ ಸಾವಿಗೆ ೧೯೨ ಪುಟಗಳು ಕಾಯಬೇಕಾಯಿತು. ದುರ್ಗಕ್ಕೆ ಮುಕ್ತಿ ದೊರಕಿದೆ .
ಹೊಸಹಗಲು ಕಂಡಿದೆ.

#swarganamdurga #fortcitychitradurga #raktharatri #histroyinspires
#tarasu #knowyournative
#ka_16 #prouddurgans

ರಕ್ತ ರಾತ್ರಿ

ದುರ್ಗದ ದಂತಕಥೆ-೨/೮

ಗಾಳಿ ಗೋಪುರ -ದುರ್ಗದ ಕೋಟೆ.

ಹೊಸದಾಗಿ ಪಟ್ಟಾಭಿಷೇಕಗೊಂಡ ಓಬಣ್ಣ ನಾಯಕನ ಕೊಲೆಯೊಂದಿಗೆ ಕಂಬನಿಯ ಕುಯಿಲು ಕೊನೆಗೊಂಡಿತು. ಆ ಹತ್ಯೆಯ ನಂತರ  12 ವರ್ಷಗಳ ಕಾಲ ಆಳಿದ ಚಿಕ್ಕಣ್ಣ ನಾಯಕನ ಸಾವಿನ ನಂತರವು ಓಬಣ್ಣನ ಪರವಾಗಿ ಗದ್ದುಗೆಯ ಹಕ್ಕನ್ನು ಬಿಟ್ಟುಕೊಟ್ಟಿದ್ದ ಲಿಂಗಣ್ಣ  ತಾನು ರಕ್ಷಿಸುವುದಾಗಿ ಪ್ರಮಾಣ ಮಾಡಿದ ಓಬಣ್ಣ ಹಾಗೂ ಆತ್ಮಹತ್ಯೆ ಮಾಡಿಕೊಂಡ ಓಬವ್ವ ನಾಗತಿಯನ್ನು ರಕ್ಷಿಸಲಾಗದ ಪಾಪಪ್ರಜ್ಞೆಯಲ್ಲಿ ದಿನನಿತ್ಯ ಬದುಕುತ್ತಿದ್ದ ಸನ್ನಿವೇಶದಿಂದ
ರಕ್ತ ರಾತ್ರಿಯು ಎತ್ತಿಕೊಳ್ಳುತ್ತದೆ.
ಈ 12 ವರ್ಷಗಳಲ್ಲಿ, ಮೊದಲ ಪುಸ್ತಕದ ಪಿತೂರಿಗಳ ಹಿಂದೆ ಇದ್ದ ದಳವಾಯಿ ಮುದ್ದಣ್ಣ ಹಾಗೂ ತನ್ನ ತಮ್ಮಂದಿರ ಅಟ್ಟಹಾಸಕ್ಕೆ ಮತ್ತೊಬ್ಬ ಬೊಂಬೆ ಆಡಳಿತಗಾರನನ್ನು ಸ್ಥಾಪಿಸಬೇಕಾಗಿತ್ತು.

ಮುದ್ದಣ್ಣನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ತನ್ನ ಹಿತೈಷಿಗಳಾದ ಭರಮಣ್ಣ, ಭುವನಪ್ಪನವರ ಹಾಗೂ ಸ್ವಾಮಿಗಳ ಒತ್ತಡದ ಮೇರೆಗೆ ಲಿಂಗಣ್ಣನವರು ಇಷ್ಟವಿಲ್ಲದಿದ್ದರೂ ಗದ್ದುಗೆ ಏರಲು ಒಪ್ಪಿ ತನಗಿಂತಲೂ ಶಕ್ತಿವಂತ ಮುದ್ದಣ್ಣನ ರಾಜಕೀಯ ಮೀರಲಾಗದೆ  ಅರ್ಥಹೀನ ಅಸ್ತಿತ್ವವನ್ನು ಮುನ್ನಡೆಸುತ್ತಾನೆ. ಇದನ್ನು ವಿರುದ್ಧಿಸಿದ ಗುರುವನ್ನು ಗೃಹಬಂಧನದಲ್ಲಿರಿಸಿ ಉಳಿದ ಇಬ್ಬರನ್ನು ಸೆರೆಮನೆಗೆ ಹಾಕಿ, ಲಿಂಗಣ್ಣನನ್ನು ಸೆರೆಹಿಡಿದು ಗಲ್ಲಿಗೇರಿಸುತ್ತಾನೆ. ಕೊಲೆಯಾದ ಲಿಂಗಣ್ಣನ ಮೇಲೆ ಮುದ್ದಣ್ಣನ ಭೀಕರ ನಗುವಿನೊಂದಿಗೆ ಪುಸ್ತಕವು ಭೀಕರ ಟಿಪ್ಪಣಿಯಲ್ಲಿ ಕೊನೆಗೊಳ್ಳುತ್ತದೆ.

ನಾಗತಿಯ ನೆರಳು, ಕೆರಳಿದ ಹುಲಿ, ಆರುವ ದೀಪ ಮತ್ತು ರಕ್ತರಾತ್ರಿ ಎಂಬ ನಾಲ್ಕು ಅಧ್ಯಾಯಗಳಲ್ಲಿ ಒಂದೊಂದು ವಿಭಿನ್ನ ರಾಜಕೀಯ ತಿರುವುಗಳು ಕಾಣಸಿಗುತ್ತವೆ. ಲಿಂಗಣ್ಣನಾಯಕನ ಅಧಿಕಾರವೆನಿಸಿಕೊಳ್ಳದ ಅಧಿಕಾರ, ದುರುದ್ದೇಶಪೂರಿತ ಮುದ್ದಣ್ಣನನ್ನು ದುಷ್ಟ, ಕುತಂತ್ರ, ಅನಾಗರಿಕತೆ, ಧೀರ ಹೊರಕೆ ನಾಯಕ, ಸೇಡಿನ ಗಿರಿಜಾ, ಬೆದರಿಸುವ ಮುದ್ದಣ್ಣನ ದಮನಕ್ಕೆ ಮಣಿಯದ ಉದಾತ್ತ ಗೌಡ… ತಾ.ರಾ. ಸು. ಪಾತ್ರ ಚಿತ್ರಣದಲ್ಲಿ ತನ್ನ ಕೈಚಳಕವನ್ನು ಪ್ರದರ್ಶಿಸುತ್ತಾರೆ, ದುರ್ಗದ ಜನರ ಸೇಡಿನ ಕಿಡಿ, ಭುವನಪ್ಪ ಮತ್ತು ದೇಸಣ್ಣನವರ ಮಕ್ಕಳ ರಾಜ ನಿಷ್ಠೆ, ಕಸ್ತೂರಿ ನಾಯಕರ ಕುಟುಂಬದವರ ಅಸಹಾಯಕತೆ ಎಲ್ಲವೂ ಸೇರಿ ಕಾದಂಬರಿಯ ಒಟ್ಟಂದವನ್ನು ಹೆಚ್ಚು ಮಾಡಿವೆ.

ಅರ್ಧ ಪುಟಕ್ಕಿಂತ ಕಡಿಮೆ ಐತಿಹಾಸಿಕ ದಾಖಲೆಯಿಂದ ಪ್ರಬುದ್ಧ ಕಥೆಯನ್ನು ರಚಿಸಿ ಓದುಗರನ್ನು ಮುಂದಿನ ಪುಸ್ತಕವನ್ನು ಎತ್ತಿಕೊಳ್ಳುವಷ್ಟು ತೊಡಗಿಸುವುದು ತಾ.ರಾ.ಸು ಅವರ ಹೆಗ್ಗಳಿಕೆ!

ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತೆ ಮುದ್ದಣ್ಣನ ಅಂತ್ಯವೂ ಸನ್ನಿಹಿತವಾಗಿರಲಿ! ತಿರುಗುಬಾಣದೊಂದಿಗೆ ಮತ್ತೆ ಬರುತ್ತೇನೆ!!

#swarganamdurga #fortcitychitradurga #raktharatri #histroyinspires
#tarasu #knowyournative
#ka_16 #prouddurgans

ಕಂಬನಿಯ ಕುಯಿಲು

ಇದು ಮತ್ತಿ ವಂಶದ ತಿಮ್ಮಣ ನಾಯಕರು ಸ್ಥಾಪಿಸಿದ ಐತಿಹಾಸಿಕ ದುರ್ಗದ ದಂತಕಥೆ- ೧/೮

ಒಂಟಿ ಕಲ್ಲು ಬಸವ – ದುರ್ಗದ ಕೋಟೆ.

ತ ರಾ ಸು ಅವರ ವಿಶಿಷ್ಟ ಬರವಣಿಗೆಯ ಶೈಲಿಯಲ್ಲಿ ದುರ್ಗವನ್ನು ಕಣ್ಣಮುಂದಿರಿಸಿ, ಪಾತ್ರಗಳಿಗೆ ಜೀವ ತುಂಬಿ,ಕಣ್ಣಿಗೆ ಕಟ್ಟುವ ಹಾಗೆ, ಮನಕ್ಕೆ ಮುಟ್ಟುವ ಹಾಗೆ ವಿವರಿಸಿದ್ದಾರೆ.

ದುರ್ಗದ ಇತಿಹಾಸವನ್ನು ಕಾದಂಬರಿ ರೂಪದಲ್ಲಿ ಇಷ್ಟು ಸೊಗಸಾಗಿ ದಾಖಲಿಸಲು ಯಾರಿಂದಲೂ ಸಾದ್ಯವಿಲ್ಲ.

ಕಸ್ತೂರಿರಂಗಪ್ಪನಾಯಕನ ಕೊನೆಯ ಮಗ ಮದಕರಿ ನಾಯಕ ಸಂತಾನ ಹೀನನಾಗಿ ಮರಣ ಹೊಂದಿದ ನಂತರ ದುರ್ಗದ ಮುಂದಿನ ದೊರೆ ಯಾರು  ಎಂಬುದರ  ಬಗ್ಗೆ ಇಡಿ ಕಾದಂಬರಿ ಆಧಾರಿತವಾಗಿದೆ.
ರಾಜರ ಆಳ್ವಿಕೆಯ ಕಲ್ಪನೆ, ಬಹುಪತ್ನಿತ್ವ, ಸಹಗಮನದ ಬಗ್ಗೆ ಮುಕ್ತವಾಗಿ ಇಲ್ಲಿ ಕಾಣಸಿಗುತ್ತದೆ.

ಅಣ್ಣ ಸರ್ಜೆನಾಯಕರ ಮಕ್ಕಳಿಗೆ ಅಧಿಕಾರ ಹೋಗಬೇಕು ಎನ್ನುವುದು ನ್ಯಾಯಯುತವೇ ಆದರೂ ದಳವಾಯಿಗಳ ಯೋಜನೆಗಳನರಿತ ದಿವಂಗತ ಮದಕರಿನಾಯಕರ ಮನದಿಂಗಿತ
ತನ್ನ ಕಿರಿಯ ಹೆಂಡತಿಯ ತಮ್ಮನನ್ನೆ ದತ್ತು ಪುತ್ರನಾಗಿ ಸ್ವೀಕರಿಸುವುದಾಗಿತ್ತು. ಮೂವತ್ತು ನಾಗತಿಯರು ಸಹಗಮನ ಮಾಡಿದರೆ ನಾಯಕರ ಆಸೆಯೂ ಈಡೇರದು ಎಂದು ಕೊನೆಯ ನಾಗತಿ ಹೇಳಿದಾಗ ಮೊದಲ ನಾಗತಿ ಉಳಿದುಕೊಂಡು ಹಲವು ವಿರೋಧಗಳಿದ್ದರರೂ ಮಿಕ್ಕ ವಿಧಿವಿಧಾನಗಳನ್ನು ಪೂರೈಸುತ್ತಾಳೆ. ಉಪ್ಪುಂಡ ಮನೆಗೆ ದ್ರೋಹ ಬಗೆಯ ಹೊರಟ ದಳವಾಯಿಗಳ  ವಿರೋಧಗಳ ನಡುವೆ ಒಬವ್ವನಾಗತಿಯು ಹೊಸದಾಗಿ ಪಟ್ಟಕ್ಕೆ ಬಂದ ರಾಜಕುಮಾರನನ್ನು ಹೇಗೆ ಕಾಯುತ್ತಾಳೆ!?

ಆ ತಾಯಿಮನದ ತೊಳಲಾಟ,ಲಿಂಗಣ್ಣನ ದೇಶದ ಹಿತಾಸಕ್ತಿ, ತ್ಯಾಗದ ತೇಜಸ್ಸು,ಭುವನಪ್ಪ ನ ಸಾರ್ವಕಾಲಿಕ ಸ್ವಾಮಿ ನಿಷ್ಠೆ, ಗಿರಿಜವ್ವೆಯ ಒಳಿತು ಬಯಸುವ ಮನಸ್ಸು, ದಳವಾಯಿಗಳ ಉಪಟಳ ಉಪದ್ರವಗಳು. ದಳವಾಯಿ ದೇಸಣ್ಣ ನ ಪಶ್ಚಾತ್ತಾಪದ ಬೇಗೆ  ದಳವಾಯಿ ಮುದ್ದಣ್ಣ ನ ಕ್ರೌರ್ಯ, ಅಸಂಬದ್ಧ ಸೇಡು, ಹುಚ್ಚಿ ಹನುಮವ್ವನ ಯುದ್ಧ ವಿರೋಧಿ ತೊಳಲಾಟಗಳು ಇದೆಲ್ಲವುಗಳ ಸಂಮಿಶ್ರಿತ ಮೂಖ ರೋಧನೆಯೆ,

ಕಂಬನಿಯ ಕುಯಿಲು.

ಮುಂದೆ  ಮತ್ತೆ ಸಿಗುವ.

#swarganammadurga #fortcitychitradurga #historyinspires #ka_16 #knowyournative

ದುರ್ಗದ ದಂತಕಥೆಗಳು

ನಮ್ಮೂರು ಚಿತ್ರದುರ್ಗ, ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿಯಾಗಿದೆ, ಅದನ್ನು ಮದಕರಿ ನಾಯಕ ಆಳ್ವಿಕೆ ಮಾಡುತ್ತಿರುವಾಗ ಹೈದರಾಲಿ ಕೋಟೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಹೀಗೆ ಸಣ್ಣವರಿದ್ದಾಗಿನಿಂದಲೂ ನಮಗೆ ಕೋಟೆ ನೋಡಲು ಹೋದಾಗ ಎಲ್ಲರೂ ಹೇಳುತ್ತಿದ್ದರು.

ಚಿತ್ರದುರ್ಗದ ಕೋಟೆ

ಇಷ್ಟು ಮಾತ್ರ ಗೊತ್ತಿದ್ದ ನನಗೆ ಒಮ್ಮೆ ತಾತನ  ಮನೆಯಲ್ಲಿ ತ. ರಾ. ಸು ಅವರು ಬರೆದ ಪುಸ್ತಕಗಳು ಕಣ್ಣಿಗೆ ಬಿತ್ತು, ಕುತೂಹಲ ಕೆದರಿ ಶೋಧಿಸಿದಾಗ ದುರ್ಗದ ಇತಿಹಾಸ ಸಾರುವ ಸಾಲು ಸರಣಿ ಪುಸ್ತಕಗಳು ಗರಿ ಬಿಚ್ಚಿದವು. ಅವುಗಳನ್ನು ಹುಡುಕಿ ಓದುವಾಗಲೇ ತಿಳಿದದ್ದು ದುರ್ಗದ ಪ್ರತಿ ಕಲ್ಲುಗಳು ರೋಚಕ ಕಥೆಗಳನ್ನು ಸಾರುತ್ತವೆಯೆಂದು.

ನಾನು ಹುಟ್ಟಿ ಬೆಳೆದ ಪ್ರಾಂತ್ಯದ ಚರಿತ್ರೆಯ ಬಗ್ಗೆ ತ ರಾ ಸು ಅವರ ದೃಷ್ಟಿಕೋನವನ್ನು ಓದಿ ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲದಿ….
ನಿರೀಕ್ಷಿಸಿ #knowyournative ಸರಣಿ!
.
#swarganammadurga #fortcitychitradurga #historyinspires #ka_16

ತ ರಾ ಸು ಅವರ ದುರ್ಗದ ಇತಿಹಾಸ ಸರಣಿಯ ಎಂಟು ಪುಸ್ತಕಗಳು

ಬನವಾಸಿಯಲ್ಲಿ ಪೇಚಾಟ!

ಎಲ್ಲರಿಗೂ ನಮಸ್ಕಾರ!🙏

ನಾನು ಅರಣ್ಯ ಮಹಾವಿದ್ಯಾಲಯ, ಶಿರಸಿಯಲ್ಲಿ ೩ನೇ ವರ್ಷದ ಅರಣ್ಯಶಾಸ್ತ್ರ ವಿದ್ಯಾರ್ಥಿನಿ! ನಾನು ೨ನೇ ವಷ೯ದಲ್ಲಿದ್ದಾಗ ಒಂದು ರಜೆಯ ದಿನ, ವಾರ ಪೂರ್ತಿ ನೆಡದ ತರಗತಿಗಳ ಬೇಸರ ಕಳಿಯಲು ನಾಲ್ಕು ಜನ ಗೆಳತಿಯರು ಕೂಡಿ ಅಲ್ಲೆ 25 ಕಿ.ಮೀ ದೂರದಲ್ಲಿರುವ ಬನವಾಸಿಯ ಮಧುಕೇಶನ ದರ್ಶನಕ್ಕೆ ಹೊರಟೆವು,  ನಾವು ಹೊರಟಾಗ ಸಮಯ ಮಧ್ಯಾಹ್ನ 3 ಗಂಟೆ ದಾಟ್ಟಿತ್ತು, ವಾಪಸ್ ನಮ್ಮ ವಿದ್ಯಾರ್ಥಿನಿಲಯ ಸೇರಲು ಕೊನೆ ಸಮಯ ಸಂಜೆ 7:30 ರ ವರೆಗೆ ಮಾತ್ರ. ಅಷ್ಟರೊಳಗೆ ಮರಳಿ ಬರುವುದಾಗಿ ನಿರ್ದರಿಸಿ ಹೊರಟೆವು. ಬಸ್ಗಾಗಿ ಎಷ್ಟು ಹೊತ್ತು ಕಾಲೇಜಿನ ಮುಂದೆ ಕಾದರು ಬಸ್ ಬರಲೇ ಇಲ್ಲ, ಕೊನೆಗೆ 4:20ರ ಸುಮಾರಿಗೆ kA 31 F 1383 ನೀಲಿ ಬಸ್ಸು ಬಂದಿತು, 15 ನಿಮಿಷಗಳಲ್ಲಿ ಬನವಾಸಿ ಸೇರಿದೆವು, ಬಸ್ ನಿರ್ವಾಹಕರ ಬಳಿ ಕೊನೆಯ ಶಿರಸಿ-ಬನವಾಸಿ ಬಸ್ 7:30 ರಿಂದ 8ರ ವರೆಗೆ  ಸಿಗುತ್ತವೆ ಎಂದು ತಿಳಿದು ದೇಗುಲದ ಕಡೆ ನಡೆದೆವು. ಅದು ಇಳಿ ಸಂಜೆಯ ಸಮಯವಾಗಿದ್ದರಿಂದ ಭಾವವುಕ್ಕಿ ಏನಿಸಿದ್ದು ಹೀಗೆ!

ವಿಶಾಲ ಕಲ್ಲಿನ ಗೋಪುರದಡಿಯಲಿ,
ಶಾಂತಿಯಿಂದ ಎದ್ದು ನಿಂತ ಕಂಬಗಳ ಮಧ್ಯದಲಿ, ಶಿಲೆಗಳ ಕೆತ್ತನೆಯ ಭವ್ಯ ನೋಟದಲಿ,
ವಿವಿಧ ಭಂಗಿಯ ವೈಖರಿಗಳ ಮಾಟದಲಿ, ಸೂರ್ಯಸ್ತವು ಚೆಲ್ಲುವ ಕಿರಣಗಳ ಅಂಚಿನಲಿ ಮಧುಕೇಶನ ದೇಗುಲದ ಪ್ರಕಾರದಲಿ,
ಸ್ತಬ್ದವಾಯಿತು ಮನ ಬನವಾಸಿಯಲಿ…!

ಪೂಜೆ ಮುಗಿಸಿ, ಸ್ವಲ್ಪ ಹೊತ್ತು ಅಲ್ಲೇ ಸಮಯ ಕಳೆದು, 7 ಗಂಟೆ ಸಮೀಪಿಸುತ್ತಿರುವಾಗ ಬಸ್ ನಿಲ್ದಾಣದ ಕಡೆಗೆ ಬಂದೆವು, ಬಸ್ ನಿಂತಿರುವುದನ್ನು ನೋಡಿಯೂ ಇನ್ನೂ ಸಮಯ ಬಾಕಿ ಇದೆ ಮುಂದಿನ ಬಸ್ಸಿಗೆ ಹೋದರಾಯಿತು ಎಂದು ಅಲಕ್ಷಿಸಿ  ಅಲ್ಲೇ ಇದ್ದ ಪಾನಿಪುರಿ ಗಾಡಿಯ ಬಳಿ ಜಮಾಯಿಸಿದೆವು! ಎಲ್ಲರು ತೃಪ್ತಿಯಾಗುವಷ್ಟು ಸವಿದೆವು.

ನಂತರ ನಿಲ್ದಾಣದ ಕಡೆ ಬಂದರೆ ಅಲ್ಲಿ ಬಸ್ ಇರಲಿಲ್ಲ, ಸ್ವಲ್ಪ ಹೊತ್ತು ಮತ್ತೆ ಕಾದು, ಅಲ್ಲೇ ಇದ್ದ ಅಂಗಡಿಯವರಿಗೆ ಕೇಳಿದಾಗ ಕೊನೆ ಬಸ್ಸು 7ಕ್ಕೆ ಹೊರಟು ಹೋಯಿತು ಎಂದರು. ಅಯ್ಯೋ ಆ ನಿರ್ವಾಹಕರು ತಪ್ಪು ಮಾಹಿತಿ ನೀಡಿದ್ದು ತಿಳಿದು ಜೊತೆಗೆ ನಮ್ಮ ತಪ್ಪಿನ ಅರಿವಾಗಿ ತಲೆ ಮೇಲೆ ಕೈ ಹೊತ್ತು ಕೂರುವಂತಾಯಿತು. ಆ ಅಂಗಡಿಯವರು ಮುಂದೆ ರಾತ್ರಿ 9ಕ್ಕೆ ಒಂದು ಖಾಸಗಿ ಬಸ್ಸು ಶಿರಸಿ ಹೋಗುವುದಾಗಿ ಹೇಳಿದರು. ಅಲ್ಲಿಯವರೆಗೆ ಕಾದರೆ ಹಾಸ್ಟೆಲ್ ಸಮಯ ಮೀರಿ ವಾರ್ಡನ್ ಕಡೆ ಬಯ್ಸಿಕೊಳ್ಳಬೇಕಾಗಿ ಬರುವುದು ಎಂದು ಯೋಚಿಸಿ, ನಿಲ್ದಾಣದಿಂದ ಹೊರ ಬಂದು, ಯಾವುದಾದರೂ ಶೇರ್ ಆಟೊ ಅಥವಾ ಶಿರಸಿ ಕಡೆ ಹೋಗೊ ಕಾರುಗಳು ಸಿಗಬಹುದೆನೋ ನೋಡ ಹೊರಟೆವು! ಏನು ಉಪಯೋಗವಾಗಲಿಲ್ಲ. ಮತ್ತೆ ನಮ್ಮ ಸಹಪಾಠಿಗಳಿಗೆ ಯಾರಿಗಾದರೂ ಕರೆ ಮಾಡಿ ಕರೆದುಕೊಂಡು ಹೋಗಲು ಕರೆಯೋಣವೆಂದರೆ ನಾವು ನಾಲ್ಕು ಜನರಿದ್ದೆವು, ಅವರಿಗೂ ಕರೆದುಕೊಂಡು ಹೋಗಲು ಕಷ್ಟವಾಗುತ್ತದೆ ಎಂದು ಸುಮ್ಮನಾದೆವು.

ಮುಂದೆ ಏನು ಮೂಡುವುದೊ ತಿಳಿಯದೆ ಮರಳಿ ನಿಲ್ದಾಣಕ್ಕೆ ಹೋಗಿ ಪೇಚು ಹಾಕಿ ಕುಳಿತೆವು. ಹಾಗೇ ಕಾಯುತ್ತಾ ಸಮಯ 8 ಸಮೀಪಿಸಿತು, ನಿಲ್ದಾಣದಲ್ಲಿ ಬೇರೆ ಯಾರು ಇಲ್ಲದೆ ನಾವೇ ನಾಲ್ಕು ಜನ ಹುಡುಗೀರು, ಏನೋ ವ್ಯವಸ್ಥೆ ಅಗುತ್ತದೆ ನಾವು ಹಾಸ್ಟೆಲ್ ಸೇರುತ್ತೇವೆ ಎಂಬ ಧೈರ್ಯವಿದ್ದರೂ ಮನದ ಮೂಲೆಯಲ್ಲೆಲ್ಲೋ ಸಣ್ಣ ಭಯ.

ಹಾಗೆ ಶುರುವಿನಲ್ಲಿ ನಿಮಗೆ ನಾನು ಅಲ್ಲಿಗೆ ಹೋದ ಬಸ್ ನಂಬರ್ ಕೂಡ ನೆನಪ್ಪಿಟ್ಟಿದ್ದು ಸೊಜಿಗವೆನಸಲಿಲ್ಲವೇ!? ಹಾ ಅದು ಯಾಕೆಂದು ಈಗ ಹೇಳುತೇನೆ ಕೇಳಿ!😄 ನಾವು ಅಲೇ ಕಾಯುತ್ತಿದ್ದಾಗ ಸುಮಾರು 8:20ಕ್ಕೆ  ನಾವು ಬನವಾಸಿಗೆ ಬಂದ ಅದೇ ಬಸ್ಸು  ಶಿರಸಿಯಿಂದ ಬಂತು. ಎಲ್ಲಾ ದಿನವು ಅಲ್ಲೇ ಹಾಲ್ಟಾಗುವ ಬಸ್ಸಿಗೆ ಅಂದೇ ಏಕೋ ಪ್ರಯಾಣಿಕರನ್ನು ಇಳಿಸಿ ಮರಳಿ ಶಿರಸಿ ಬರಲು ಆದೇಶಿಸಿದ್ದರಂತೆ ಅದು ನಮ್ಮ ಅದೃಷ್ಟವೇ ಸರಿ… ತಪ್ಪು ಮಾಹಿತಿ ನೀಡಿದ್ದ ನಿರ್ವಾಹಕರು ನಮ್ಮನ್ನು ಕರೆದು ಬಸ್ ಹತ್ತಲು ಹೇಳಿದರು…. ಬಸ್ಸಿನಲ್ಲಿ ನಾವಲ್ಲದೇ ಬೇರೆ ಯಾವ ಪ್ರಯಾಣಿಕರು ಇಲ್ಲ.

ಚಾಲಕರು, ನಿರ್ವಾಹಕರು, ನಮಗೆ ಇನ್ನು ಮುಂದೆ ಕತ್ತಲಾಗುವದರೊಳಗೆ ಹಾಸ್ಟೆಲ್ ಸೇರುವಂತೆ ಬಯ್ದರು, ಶಿರಸಿಗೆ ಬರುವಷ್ಟರಲ್ಲಿ 8:30ರ ಸಮಯ, ಕರೆದು ತಂದವರಿಗೆ ಧನ್ಯವಾದ ತಿಳಿಸಲು ಮರೆಯದೆ, ಹಾಸ್ಟೆಲ್ ಕಡೆ ನಡೆದೆವು. ವಾಚ್ ಮೆನ್ ಏಕೆ ತಡವೆಂದು ಕೇಳಲು, ಸಿದ್ಧವಾದಂತಿತ್ತು, ಕೇಳಿದರು ಸಹ, ನಂತರ ವಾರ್ಡನ್ ಬಳಿ ತಡವಾಗಿದಕ್ಕೆ ಬಯ್ಗುಳ ತಿಂದು, ಇನ್ಮುಂದೆ ಹೀಗಾವುದಿಲ್ಲವೆಂದು ತಿಳಿಸಿ ಒಳನಡೆದೆವು.  ಏನೆಂದರೂ ಈ ಲೇಟ್ ಲತೀಫ್ KA 31 F 1383 ನೆನಪಿನ ಪುಟಗಳಲಿ ಚಿರವಾಯಿತು!

ಇಂದಿಗೆ ನಮ್ಮ ಈ ನೆನಪಿಗೆ ಎರಡು ವರ್ಷ!

ಇನ್ನೂ ಹೆಚ್ಚು ಸಾಹಸಗಾತೆಗಳ ಹೊತ್ತು ತರುವ ಹಂಬಲವಿದೆ. ನಿರೀಕ್ಷಿಸಿ!🙂

ಇಂತಿ ನಿಮ್ಮವಳು, ವಿಸ್ಮಯ.

ಹಾಯ್, ಹಲೋ … ಓದುಗರಿಗೆ ನಮಸ್ಕಾರಗಳು . ಇಷ್ಟು ದಿನಗಳ ಕಾಲ ನನ್ನ ಬರವಣಿಗೆಗಳನ್ನು , ಓದಿ ಬೆಂಬಲ ಕೊಟ್ಟವರಿಗೆ ನನ್ನ ಧನ್ಯವಾದಾಗಳು.
ಇನ್ಮುಂದೆ ನಾನು ಮತ್ತು ನನ್ನ ಸಹೋದರಿ, ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿಸ್ಮಯ ರೆಡ್ಡಿ ಸೇರಿ ಬರವಣಿಗೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ, ನಿಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಯಸುತ್ತಾ


ನಿಮ್ಮವ
– ತೇಜಸ್ ರೆಡ್ಡಿ

Welcome to the club dude @vismaya26cdg

ಸೇಡಿನ ಪಯಣ …. ಸಂಡೂರಿನೆಡೆ

13 ನೇ ಆಗಸ್ಟ್ , ಮುಂಜಾನೆ 6:30 ಸುಮಾರು , ನನ್ನ ಸಹೋದರಿ ತನ್ನ ಪ್ರವಾಸದ ಚಿತ್ರ ವಾಟ್ಸಪ್ ಮುಖಾಂತರ ಕಳಿಸಿದಳು. ಇಬ್ಬರ ನಡುವೆ ಆನ್ಲೈನ್ ಅಸೂಯೆ ಶುರುವಾಯಿತು. ಆ ಅಸೂಯೆಯಿಂದ ಕೂಡಿಬಂದ ಆಸೆಯೇ ಈ ಸಂಡೂರಿನ ಪಯಣ.

1 ಪಯಣಿಗ , 2 ಚಕ್ರಗಳ ವಾಹನ , 3 ನಿಲ್ದಾಣಗಳು , 4 ಚಿತ್ರಗಳಿಂದ ಹುಟ್ಟಿದ ಅಸೂಯೆ , 50 ನಿಮಿಷಗಳ ಪ್ರಯಾಣ ಮತ್ತು 60 ಕಿ.ಮೀ ನ ಅಂತರ.

ಸುತ್ತಲೂ ಅರಣ್ಯ , ಹಸಿರು ವಾತಾವರಣ. ತಣ್ಣನೆಯ ಗಾಳಿ , ಮಳೆಯನ್ನು ಸೂಚಿಸುತಿದ್ದ ಮೋಡಗಳು , ಸುಂದರದ ಸಂಡೂರು .

View point , sanduru

ಈ ಸೇಡಿನ ಪ್ರವಾಸ ನಿನಗೆ ಅಂಕಿತ , ಸಹೋದರಿ ವಿಸ್ಮಯ @vismaya26cdg .

ಇಂತಿ ನಿನ್ನ ಸಹೋದರ

-ತೇಜಸ್ ರೆಡ್ಡಿ

ಋಣ:

ಕೂಗಿ ಕೂಗಿ ಕರೆದೆ ನೀ ನನ್ನ ಇಂದು, ಕಾರಣಗಳಿಂದ ಇಲ್ಲಿಯೇ ಉಳಿದುಕೊಂಡೆ ನಾನು. ಬಿಡದೇ ಕಾಡುತ್ತಿದ್ದೆ ನೀ ಎಂದೆಂದೂ, ಬಿಡಲಾದರೂ ಬಿಟ್ಟೆನು ನೊಂದು. ತಪ್ಪದೇ ಬರುವೆ ನಾನಂದು, ತೀರಿಸಿಯೇ ಬಿಡುವೆ ನನ್ನ ಮೇಲೆ ಇರುವ ಆ ಋಣ ‘ವ ಎಂದೆಂದೂ …………………😇

ಇಂತಿ ನನ್ನ …..ನೀ ಯಾರೋ…….

ಕುರುಮರದಿಕೆರೆಯಲ್ಲಿ ಕುಟುಂಬ 😍

ಮನೆಯಲ್ಲಿ ಕೂತು ಎಲ್ಲರಿಗೂ ಬೇಸರ ಹೊರಗಡೆ ಹೋಗಲು ಎಲ್ಲರಲ್ಲೂ ಕಾತುರ ಅದೋ ಹೊರಟೆವು ನೋಡಲು ಪ್ರಕೃತಿಯ ಆ ಸುಂದರ ………

ಕೋರೋನದ ಕಂಟಕದಿಂದ ಮನೆಯಲ್ಲಿಯೇ ಸಮಯ ಕಳೆದು ಬೇಸರಗೊಂಡು , ಒಂದು ಚಿಕ್ಕ ಪ್ರವಾಸ ಮಾಡಲು ನಿರ್ಧರಿಸಿದರು . ಮಳೆಗಾಲದ ಸಮಯ , ಮುಂಜಾನೆ ೫ ಕ್ಕೆ ಚಿತ್ರದುರ್ಗದ ಊಟಿ ಎಂದೇ ಪ್ರಸಿದ್ಧವಾಗಿರುವ ‘ ಕುರುಮರದಿಕೆರೆ’ಗೆ ಹೊರಟೆವು .

೧೬ ° ತಾಪಮಾನ , ಸುತ್ತಲೂ ಹಸಿರು ಕವಿದ ವಾತಾವರಣ. ನಡೆಯಲಾಗದ ಕಲ್ಲು- ಬಂಡೆಗಳಿಂದ ಕೂಡಿದ ಹಾದಿ, ಹುಳ – ಹುಪ್ಪಡಿಗಳಿಂದ ತುಂಬಿದ ಗಿಡಗಳು , ತೇವಾಂಶ ಹೊಂದಿದ ನೆಲ .

ಇದೋ ನನ್ನ ಕುಟುಂಬ 🖤

ಆ ದೃಶ್ಯ ನೋಡಿ ಎಲ್ಲರ ಕಣ್ಣುಗಳಲ್ಲಿ ಕುಷಿ , ಮುಖದಲ್ಲಿ ನಗು , ಮನಸ್ಸಿಗೆ ಆನಂದ ದೊರೆಯಿತು . ಆದರೂ ಅಲ್ಲೋಬ್ಬ ಮೂಕವಿಸ್ಮತನಾಗಿ ಕೂತಿದ್ದ

ಇಂತಿ ನಿಮ್ಮವ – ತೇಜಸ್ ರೆಡ್ಡಿ

Let me now who read this ….. 😜 Text me after

A Sudden Plan-part 1 Dandeli

It all started making a plan for trip, as those were weekend holidays , all set to go Banglore but a sudden cancellation was made but some people who was ready to. We fixed our mind to travel so decided that we must make a trip

6-8 members gathered in a room, all started to suggest a place. I told about Dandeli , a sudden plan was made , searched train routes and plan was ready. All we should do was waiting for the time. Train was at midnight but we left hostel at evening 4 , watched movie ,had dinner and reached train station at 9pm . Slept on platform for another 4 hours , finally got tickets at 1 am.

Train arrived within half an hour , there wasn’t a little space atleast to stand . We all laughed at each other , “even the tickets laughed looking us that u should buy tickets for this luxury ” . Successfully made a sleepless night . I wanted the every station arriving to be our destination so that we can be free from that rush

Finally reached Hubbali at 6am , made a move to Dharwad . As soon as we reached Dharwad we got a bus to Dandeli . With in one and half hour reached destination. Finally😅

Booked package from a resort for water activities & sightseeing. The guide took us to the water flow region of kali river to enjoy activities

Supa Dam Reservoir

Activities u must do here are , kayaking, boating, river rafting

Kayaking
River Rafting

As soon as we finished activities , he took us to backwater of SUPA dam and we were starving already , told him take us to lunch .

Finally done with Dandeli ❤️ , back to bus stand 😂 . MOST OF THE TIME I SPENT DURING TRIP IS IN BUS STOP & RAILWAY STATION

To be continued in part 2

Part 2 – GOA😍

We all get tired at the end of the day , but not enough satisfied . It’s around 90kms from Dandeli to goa , all done set to explore goa . It’s our bad luck that road was blocked due to heavy rainfall. I checked for bus services to goa , it was at 11pm from Dharwad to Panaji . We all returned to Dharwad some how with half consciousness in sleep

We had our dinner and reserved seats , had enough time to sleep , slept for 2 hours in bus stand 😂. Finally bus arrived , we occupied our respective places. I spent a sleepless night , some people can’t get sleep in journeys and I am that kind of a person , phone wasn’t charge , it was very difficult to pass that night

6am in the morning at Panaji , Goa. It took another hour by local transport to reach Calangute. Any where u go around the world , u will find a Kannadiga working there . The same way we found a guy who work in a lodge . Lodge is infront of beach , Got refreshments , had breakfast . Off to beach.

Feet were burning for every step we took on sand way to beach. A view of endless ocean , seems to be water and sky were kissing each other . An immerse in water gives a chilled feel.

Enjoyed for others 2 hours , all were tired enough . Eyes were burning due to salt in sea water. Pockets were filled with sand and salt ,we return to room.

All get bathed some how , were starving . The biggest challenge u could face if u visit goa is , you won’t get a tasty food even ,if you are ready to pay double or triple money you people will pay in Karnataka. I believe any one can settle well economically if you start a mobile canteen with tasty food in Goa

Night was well spent in Pub , slept well that night .The very next morning we were ready to return

The biggest challenge in front of us was to travel the distance we covered in 2 nights in a single day , it’s very hard without rest. Started our journey back to Hubbali by bus ,it took 6 hours. Reached Hubbali at 5pm , spent another 5 hours in railway station . Finally back to Bellary at 4 am . Done with Goa😍

With love.

– Tejas reddy.

ಅಂದಿನ ಮೌನ ಮಾತಾದಾಗ………

ತಯಾರಿ..,

ಬಿ.ಎ.ಎಂ.ಎಸ್. ೨ನೇ ಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಕುತೂಹಲದ ಪ್ರವಾಸ. ಔಷಧ ಸಸಿಗಳನ್ನು ನೋಡುವ ನೆಪ ಹಿಡಿದು ೩ ದಿನಗಳ ಕಾಲ ಸುತ್ತಾಡುವ ಚಿಂತನೆಯಲ್ಲಿ ಇರುತ್ತಾರೆ. ನಮ್ಮ ಉದ್ದೇಶವು ಅದೇ ಇತ್ತು.

೨ ನೇ ಹಂತದ ತರಗತಿಗಳು ಪ್ರಾರಂಭವಾಗುತ್ತಿದ್ದಂತೆಯೇ , ಅದರ ಬಗ್ಗೆ ಕುತೂಹಲದಿಂದಿದ್ದೆವು. ಅತಿ ಆಸೆ ಗತಿಗೇಡು ಎಂಬಂತೆ , ತರಗತಿ ಶಿಕ್ಷಕರಿಗೆ ಎಷ್ಟೇ ವಿನಂತಿಸಿದರು ಅವರ ಮನಸ್ಸು ಒಗ್ಗಲಿಲ್ಲ. ಎಲ್ಲರೂ ಅದರ ಆಸೆ ಬಿಟ್ಟಿದ್ದರು.

ಹಠಾತ್ತಾಗಿ ಒಂದು ದಿನ ವಿದ್ಯಾರ್ಥಿಗಳಿಗೆ ಪ್ರವಾಸದ ತಯಾರಿ ನಡೆಸಲು ತಿಳಿಸಿದರು. ಆಸೆಯ ಮೊಳಕೆ ಚಿಗರೊಡೆದಂತೆ ಆಯಿತು . ೧ ವಾರದ ಸಮಯ ಮಾತ್ರ ಉಳಿದಿತ್ತು. ಆಹಾರ, ಹಣಕಾಸು ಮತ್ತು ವಾಹನದಂತೆ ಜವಾಬ್ದಾರಿಗಾಗಿ ಗುಂಪುಗಳಾಗಿ ವಿಂಗಡಿಸಿದೆವು. ಎಲ್ಲಾ ತಯಾರಿ ನಡೆಸಿ ೬ ಫೆಬ್ರವರಿ , ಸಂಜೆ ಪ್ರಯಾಣ ನಡೆಸಲು ಸಿದ್ಧರಾಗಿದ್ದೆವು.

ಅಧ್ಯಾಯ -೧ ……

ಮುಸ್ಸಂಜೆ ವೇಳೆ , ಸೂರ್ಯನ ಕಿರಣಗಳು ಅಂತ್ಯವಾಗುತಿದ್ದಂತೆಯೇ, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಹೊಳೆಯಲು ಪ್ರಾರಂಭವಾಯಿತು. ಯಾವುದೇ ವಿಘ್ನ ನಡೆಯದಂತೆ , ವಾಹನಕ್ಕೆ ಪೂಜೆ ನಡೆಸಿ ಪ್ರಯಾಣ ನಡೆಸಿದೆವು.

ಡಿಜಿ’ಯಲ್ಲಿ ಡಿಜೆ ರಾತ್ರಿ

ವಾಹನ ಬಳ್ಳಾರಿ ನಗರದ ಗಡಿ ದಾಟುತ್ತಿದ್ದಂತೆ ಹಾಡುಗಳ ಸುರಿಮಳೆ ನಡೆಯಿತು , ಎಲ್ಲರ ದೇಹದಲ್ಲಿ ಮೈಕೆಲ್ ಜಾಕ್ಸನ್ ಪ್ರವೇಶಿಸಿದನು. ಹುಚ್ಚರಂತೆ ಕುಣಿಯಲು ಪ್ರಾರಂಭಿಸಿದರು , ಹುಡುಗರು ಹಾಗೂ ಹುಡುಗಿಯರ ನಡುವೆ ಪೈಪೋಟಿ ನಡೆಯಿತು , ಅದರಲ್ಲಿ ಪ್ರೇಕ್ಷಕರು ಬಹುಮಾನ ಪಡೆದರು .

ಒಂದು ಗುಟ್ಟು , ಒಂದು ಸುಳ್ಳು , ಒಂದು ನಿಜ .

ಆ ರಾತ್ರಿ ಮನಸ್ಸು ಮುಟ್ಟಿದ ಮೂರು ಘಟನೆಗಳು . ಅಂದು ಎಲ್ಲರೂ ಸಂತಸ , ಸಡಗರದಿಂದ ಕೂಗಾಡುತ್ತಾ ಕುಣಿಯುತ್ತಿದ್ದರು. ನಾನು ಕಿಟಕಿ ಪಕ್ಕ ಮೌನವಾಗಿ ಕೂತಿದ್ದೆನು. ಆ ಮೌನ ಮಾತಾದರೆ ೩ ಸನ್ನಿವೇಶಗಳು ಹೊರಬರುತ್ತವೆ.

ನೀನು ಎಂತಕ್ಕೆ ಸಂಭ್ರಮಿಸದೆ ಕುಳಿತಿರುವೆ ಎಂದು ಪ್ರಶ್ನಿಸಿದರು. ನನಗೆ ಅತಿಯಾದ ಸಂಭ್ರಮ , ಸಡಗರ ಅಂಗೀಕಾರವಾಗದು ಎಂಬ ಸುಳ್ಳು ಹೇಳಿದೆ. ಆದರೆ ಅದಕ್ಕೆ ಕಾರಣ ಮತ್ತೊಂದು ಇತ್ತು , ಅಂದಿಗೆ ನನ್ನ ಅಜ್ಜ ತೀರಿಕೊಂಡು ಒಂದು ವರ್ಷಗಳ ಕಾಲವಾಗಿತ್ತು ಅದು ಗುಟ್ಟಾಗಿ ಉಳಿದಿತ್ತು.

ಮತ್ತೆ ನಿಜದ ಬಗ್ಗೆ ಹೇಳಬೇಕೆಂದರೆ , ಬಹಳ ದಿನಗಳ ಕಾಲ ಹಿತಿ ಮಿತಿಗಳಿಂದ ಪಂಜರದಲ್ಲಿ ಇದ್ದಂತೆ ಇದ್ದ ವಿದ್ಯಾರ್ಥಿಗಳಿಗೆ ಸ್ವತಂತ್ರ ಸಿಕ್ಕರೆ ಎಂದೂ ಕಾಣದ ಸಡಗರ ತೋರಿಸುತ್ತಾರೆ. ಇದು ನಾನು ಅಂದು ಕಂಡ ಸನ್ನಿವೇಶ , ನನ್ನ ಅಭಿಪ್ರಾಯ ಮಾತ್ರ

ಮುಂದುವರೆಯುವುದು………………

ಅಧ್ಯಾಯ -೨_ಶಿರಸಿ

ಬೆಳಗಿನಜಾವ ೬ ಗಂಟೆ ಸುಮಾರು . ಬಲಹೀನ ಹಾಗು ನಿದ್ರೆ ಇಲ್ಲದ 😴 ಮುಖಗಳನ್ನು ಶಿರಸಿಯ ಹಸಿರು ಸೊಬಗು ಆಹ್ವಾನಿಸಿತು. ತಯಾರಾಗಿ ಬರಲು ೨ ಗಂಟೆಗಳ ಕಾಲ ಸಮಯ ದೊರಕಿತ್ತು.

ನಮ್ಮ ಆಚಾರಗಳಿಂದ ಬಂದಂತೆ , ಮೊದಲನೆಯದಾಗಿ ದೇವರ ದರ್ಶನ ಪಡೆಯಬೇಕು. ಅದರಂತೆಯೇ ಶಿರಸಿಯ ಮಾರಿಕಾಂಬಾ ದೇವಿಯ ದೇಗುಲಕ್ಕೆ ಹೊರಟಿದೆವು. ಮನಸ್ಸಿನಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು , ಭಕ್ತಿಯ ಮುಖವಾಡಗಳನ್ನು ಧರಿಸಿ ದೇವಿಯ ದರ್ಶನ ಪಡೆದರು.

೬೦ ಮಂದಿಗೆ ಒಮ್ಮೆಲೇ ಕೂರಲು ಯಾವುದೇ ಹೋಟೆಲುಗಳಲ್ಲಿ ಸಾಮರ್ಥ್ಯವಿರದ ಕಾರಣ , ೩ ತಂಡಗಳಾಗಿ ವಿಭಾಗಿಸಿದೆವು. ಅಲ್ಪಹಾರಕ್ಕೆಂದು ಬಂದವರು ಸಂಪೂರ್ಣ ಭೋಜನ ಮುಗಿಸಿದರು. ಮುಂದಿನ ನಿಲ್ದಾಣ ಬಕ್ಕಳ ಬೊಟಾನಿಕಲ್ ಗಾರ್ಡನ್.

ಸುಮಾರು ೪೫೦ ಎಕರೆ ಅರಣ್ಯ ಪ್ರದೇಶ , ಯಾವುದೇ ದೂರವಾಣಿ ಸಂಪರ್ಕ ಇರುವುದಿಲ್ಲ , ದಾರಿ ತಪ್ಪಿ ಹೋದರೆ ಹಿಂತಿರುಗುವುದು ತುಂಬಾ ಕಠಿಣ😅. ಔಷಧ ಸಸಿಗಳ ಎಲೆಗಳನ್ನು ಸಂಗ್ರಹಿಸುತ್ತಾ ಹೊರಟೆವು. ದಾರಿ ಸಾಗುತ್ತಾ ಗುಂಪುಗಳಾಗಿ ಇದ್ದವರು ,ಕೆಲವು ಜೋಡಿ 👫 ಹಾಗೂ ಸಮ್ಮಿಷ್ರಗಳಾಗಿ ಹೊರಹೊಮ್ಮಿದರು.

ಮಧ್ಯಾಹ್ನ ಊಟಾಕ್ಕೆ ಅಲ್ಲಿನ ಮಠಕ್ಕೆ ಹೋಗಲೆಂದು. ಮೊದಲೇ ತೀರ್ಮಾನವಾಗಿತ್ತು. ನಾವು ಮಠ ತಲುಪಿದಾಗ ಸಮಯ ೩ ಗಂಟೆ. ಆ ಸಮಯದಲ್ಲಿ ಯಾವುದೇ ದೇವಸ್ಥಾನ ಹಾಗೂ ಮಠಗಳಲ್ಲಿ ಪ್ರಸಾದ ದೊರೆಯುವುದಿಲ್ಲ. ಅಂತಿಮವಾಗಿ ಎಲ್ಲರೂ ಉಪವಾಸ ನಡೆಸಿದರು 😅. ಊಟ ದೊರೆಯಲಿಲ್ಲ ಎಂದು ನಾವು ಒಗ್ಗಲಿಲ್ಲ , ಸಹಸ್ರಲಿಂಗದ ಕಡೆಗೆ ಪ್ರಯಾಣ ಬೆಳೆಸಿದೆವು.

ನೇತ್ರಾವತಿ ಮತ್ತು ಕುಮಾರಧಾರ ನದಿಗಳ ದಡದಲ್ಲಿ ಸಾವಿರ ಲಿಂಗಗಳು ಉದ್ಭವವಾದ ಸ್ಥಾನವದು. ನೀರಿನಲ್ಲಿ ನಮ್ಮ ಪ್ರತೀ ಹೆಜ್ಜೆಯನ್ನು ಮೀನುಗಳ ಕಡಿತ ಕಚುಗುಳಿಯಂತೆ ಸ್ವಾಗತಿಸಿದವು

ಬಟ್ಟೆಗಳು ಒದ್ದೆಯಾದ ಕಾರಣ , ವಾಹನ ಮಾಲೀಕರು ನಿಂತು ಪ್ರಯಾಣ ಬೆಳೆಸಲು ತಿಳಿಸಿದರು. ನೆಲೆಸಿದ್ದ ಹೋಟೆಲಿನಲ್ಲಿ ಎಲ್ಲರೂ ತಯಾರಾಗಿ ಬಂದರು. ಇಲ್ಲಿಗೆ ಶಿರಸಿಯ ಭಾಗ ಮುಕ್ತಾಯ . ದಾಂಡೇಲಿಯ ❤️ ಕಡೆಗೆ ಪ್ರಯಾಣ ಬೆಳೆಸಿದೆವು.

ಮುಂದುವರೆಯುವುದು ………..

ಇಂತಿ ನಿಮ್ಮ ಪಯಣಿಗ

ತೇಜಸ್ ರೆಡ್ಡಿ

ಅಧ್ಯಾಯ -೩_ದಾಂಡೇಲಿ

ಶಿರಸಿ ಇಂದ ದಾಂಡೇಲಿಯತ್ತ ನಮ್ಮ ಪಯಣ ಸಾಗಿತು . ಸಂಜೆ ೫ ರ ನಂತರ ಅರಣ್ಯ ಮಾರ್ಗವಾಗಿ ಪ್ರಯಾಣಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅನುಮತಿ ನೀಡಲಿಲ್ಲ. ಆದ್ದರಿಂದ ೪೦ ಕಿ. ಮೇ. ಹೆಚ್ಚುವರಿ ಮಾರ್ಗದಲ್ಲಿ ಸಂಚರಿಸಿ , ದಾಂಡೇಲಿ ತಲುಪಬೇಕಿತ್ತು. ನಮ್ಮ ಸ್ನೇಹಿತನ ಹುಟ್ಟು ಹಬ್ಬ ಆಚರಿಸಲೆಂದು ತಯಾರಿ ಮಾಡಲು ಒಂದು ವಾಹನ ಹಿಂದೆ ಉಳಿದಿತ್ತು . ಎಲ್ಲರೂ ಗಾಬರಿಗೊಂಡು ವಾಹನದಲ್ಲಿ ಶಿಕ್ಷಕರೇ ಇಲ್ಲವೆಂದು ಹಬ್ಬಿಸಿದರು. ಶಿಕ್ಷಕರಿಗಾಗಿ ಹುಡುಕಾಟ ನಡೆಸಿದೆವು. ನಂತರ ಗಾಬರಿಯಾಗಬೇಡಿ ಅವರು ಇಲ್ಲೇ ಇದ್ದಾರೆ , ವಾಹನಗಳ ನಡುವೆ ಅಂತರ ಕಡಿಮೆ ಮಾಡಲು ಈ ರೀತಿ ಹೇಳಿದೆವು ಎಂದರು.

ಹಠಾತ್ತಾಗಿ ಒಂದು ವಾಹನದ ಟೈರ್ ಸ್ಫೋಟಗೊಂಡಿತು. ೬೦ ವಿದ್ಯಾರ್ಥಿಗಳನ್ನು ಒಂದೇ ವಾಹನದಲ್ಲಿ ಹೊಂದಿಸಿ ಪ್ರಯಾಣ ಬೆಳೆಸಿದೆವು.

ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ , ಅಧಿಕ ಪ್ರಸಂಗತೆ ಕೋತಿಗಳನ್ನು ಒಂದೇ ಕಡೆ ಸೇರಿಸಿದರೆ ಏನಾಗಿರಬಹುದು ಎಂಬುದು ಈಗಾಗಲೇ ನಿಮ್ಮ ಊಹೆಗೆ ಬಂದಿರುತ್ತದೆ. ಹೇಗೋ ರಾತ್ರಿ ೧ ಗಂಟೆಗೆ ದಾಂಡೇಲಿ ತಲುಪಿದೆವು. ಸುಮಾರು ೧೨ °c ತಾಪಮಾನ. ಅತಿಯಾದ ತಂಪಿನ ಕಾರಣ ದೇಹದಲ್ಲಿನ ಅಂಗಾಂಗಗಳ ನಡುಕ ಶುರುವಾಗಿತ್ತು.

ಸುಡುನೀರನ್ನು ಕುಡಿದು ೩ ಗಂಟೆಗೆ ಮಲಗಿದೆವು. ಬೆಳಗಿನಜವ ಸುಮಾರು ೬ ಗಂಟೆ , ಸಂಪೂರ್ಣ ಹಸಿರು ಕವಿದ ವಾತಾವರಣ .

ಅಲ್ಪಹಾರಕ್ಕೆಂದು ಹೊರಟ ನಮಗೆ , ರೋಗಿಗಳಿಗೆ ಆಹಾರವಾದ ಬ್ರೆಡ್ ಅನ್ನು ಬಡಸಿದರು. ಹೊರಟಿದ್ದ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಆತುರ, ಉತ್ಸಾಹ ಎಲ್ಲರಲ್ಲೂ ತುಂಬಿತ್ತು. ಅರಣ್ಯದ ಮಧ್ಯೆ ವಾಸಿಸುವ ಪಾರಂಪರಿಕ ವೈದ್ಯರ ಬಳಿಗೆ ಕರೆದುಕೊಂಡು ಹೋದರು

ಏನೋ ಹೊಸದು ಕಲಿಯಲು ಹೊರಟಿದ್ದೇವೆ ಎಂದು ಕಾತುರರಾಗಿ ಇದ್ದ ನಮಗೆ ಬೇಸರವಾಯಿತು. ಅಳತೆಯ ಆಧಾರದ ಮೇಲೆ ಗಿಡ- ಮರಗಳ ವಿಭಾಗ ತಿಳಿಸಿ ಭೋದನೆ ಮುಗಿಸಿದರು. ಅಂದಿನ ದಿನದ ಸಂಪೂರ್ಣ ಸಮಯ ಅಲ್ಲೇ ವ್ಯರ್ಥವಾಯಿತು.

ಊಟಕ್ಕೆಂದು ದೇವಸ್ಥಾನಕ್ಕೆ ಕರೆದೊಯ್ದರು , ೩ ರ ಸಮಯಕ್ಕೆ ಯಾವ ದೇವಾಲಯದಲ್ಲಿಯೂ ಊಟ ದೊರೆಯದು. ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದ ಆಹಾರ ವಿಭಾಗದ ಹಾಗೂ ವಿದ್ಯಾರ್ಥಿಗಳಿ ನಡುವೆ ರಸ್ತೆಯಲ್ಲೆ ಮಹಾ ಯುದ್ಧವೇ ನಡೆಯಿತು.

ರೆಸಾರ್ಟಗೆ ಹಿಂತಿರುಗಿ ರಾತ್ರಿಯ ಭೋಜನ ಸ್ವೀಕರಿಸಿ , ನಂತರ ಬೆಳಗಾವಿಯತ್ತ ಪಯಣ ಸಾಗಿಸಿದೆವು.

ಮುಂದುವರೆಯುವುದು………..❤️

ಅಧ್ಯಾಯ-೩_ಬೆಳಗಾವಿ

ಪ್ರವಾಸದ ಕೊನೆಯ ದಿನ , ಕೊಠಡಿಗಳಲ್ಲಿ ಹಾಡು ಹಾಗೂ ಅಲಾರ್ಮಗಳ ಸದ್ದಿನ ರಣ ಕೇಕೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ತಯಾರಿಗೊಂಡು ಅಲ್ಪಹಾರ ಸೇವಿಸಿ ತಿಳಿಯದ ಗಮ್ಯವನ್ನು ಹುಡುಕುತ್ತಾ ಹೊರಟೆವು.

ಒಂದು ಅದ್ಭುತವಾದ ಪ್ರವಾಸ ಸ್ಥಳಕ್ಕೆ ಕರೆದೊಯ್ಯುತ್ತಾರೆ ಎಂಬ ಉತ್ಸಾಹ , ಕಾತುರತೆಯಿಂದ ಹೊರಟೆವು , ಆಸೆಗಳು ನುಚ್ಚು ನೂರಾದವು . ಯಾವುದೋ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ , ಅರಣ್ಯದಲ್ಲಿ ಅಲೆಮಾರಿಗಳಂತೆ ಎಲೆಗಳನ್ನು ಕೀಳುತ್ತಾ ಸಮಯ ವ್ಯರ್ಥ ಮಾಡಿಸಿದರು .

ಸುಮಾರು ೩ ಗಂಟೆಗಳ ಅವಧಿ ವ್ಯರ್ಥವಾಯಿತು. ಎಲ್ಲರೂ ಹಸಿವಿನಿಂದ ಪರದಾಡುತ್ತಿದ್ದರು. ಹತ್ತಿರದ ಜಲಪಾತ ವೀಕ್ಷಿಸಿದ ನಂತರ ಊಟ ಮಾಡುವುದಾಗಿ ನಿರ್ಧರಿಸಿದರು.

ಸುಮಾರು ೩ ಮೈಲಿಯ ಕಾಲ್ದಾರಿ , ೫ ಸದಸ್ಯರ ಗುಂಪುಗಳಂತೆ ವಿಂಗಡಿಸಿ ಮುನ್ನಡೆದೆವು . ಕಾಡುದಾರಿ , ಗಿಡ- ಮರಗಳಿಂದ ಕವಿದ ಪ್ರದೇಶ, ಕಾಲುಗಳಲ್ಲಿ ಬೇರು-ಬಳ್ಳಿಗಳ ತದೆದಾಟ , ಕಲ್ಲು – ಬಂಡೆಗಳ ಏರು ಪೇರು, ಹಗ್ಗದ ಸಹಾಯದಿಂದ ಇಳಿಜಾರು ದಾಟಿಸಿ ಕನಕುಂಬಿ ಜಲಪಾತದ ಮುಂದೆ ನಿಂತೆವು.

೧ ತಾಸಿನ ಕಾಲ ಆನಂದದಿಂದ ಸಂಬ್ರಮಿಸಿದರು , ಸಂತೋಷದಿಂದ ಕುಣಿದಾಡಿದರು , ಮೈಮರೆತು ಜಿಗಿದಾದಿದರು. ಹಿಂತಿರುಗಿ ಹೋಗುವಷ್ಟರಲ್ಲಿ ಹಸಿವು ತಾಂಡವವಾಡುತ್ತಿದ್ದು.

ಹಸಿವಿನಿಂದ ನರಳುತ್ತಿದ್ದ ವಿದ್ಯಾರ್ಥಿಗಳು ರುಚಿಕರ ಆಹಾರ ದೊರೆಯದ ಕಾರಣ ಆಹಾರ ವಿಭಾಗದ ವಿರುದ್ಧ ದಂಗೆಯೆದ್ದರು. ಅಂದಿನ ರಾತ್ರಿ ಎಲ್ಲರೂ ಒಪ್ಪುವ ಜಾಗದಲ್ಲಿ ಊಟ ಮಾಡಿಸುವ ಭರವಸೆಯ ಮೇಲೆ ಸಮಾಧಾನ ಮಾಡಿಕೊಂಡರು. ರಾತ್ರಿಯ ಭೋಜನ ಮುಗಿಸಿ ಬಳ್ಳಾರಿಗೆ ಹಿಂತಿರುಗಿದೆವು.

ಧನ್ಯವಾದಗಳೊಂದಿಗೆ…….

ನಿಮ್ಮ ಪಯಣಿಗ ,,,,,ತೇಜಸ್ ರೆಡ್ಡಿ 🖤

Story of a windmills

It’s Chitradurga , completely covered by hills with windmills at their peak.

7 am , we decided to go there. 2 of my friends and I went on a way . 5 kms away from city on challakere road shows a hard mud road , reached the base of fans .

Anywhere I go , crazy incidents happen there for sure . Finally we were at the peak , started taking snaps , standby next to fans . A guy from the control room came near by us started to enquire us , I remained him that it’s not an offense to visit there. He told us that theft has been done here last night so you guys go back . We people thought that he was just joking us.

We ignored his words , moved forward. An unknown person with face full of mask came walking near us , started enquiring about our visit and studies .

We 3 guys were very contrast by profession. Engineer , doctor and an architect . A perfect contrast , he completed his enquiry and then finally confirmed us that he is a military guy , came here for an investigation about theft happened there. Some how escaped from him.

With love, ur traveler

– Tejas reddy.

ಕನಸಿನ ಚಾರಣ….ವ್ಯರ್ಥವಾದ ಭಾಗ

ಸುತ್ತಲೂ ಪುಸ್ತಕ , ಕಾಗದ , ಲೇಖನಿಗಳಿಂದ ಸುತ್ತುವರಿದ ವಾತಾವರಣ. ಯಾರಿಗೂ ತಿಳಿಯದಂತೆ ಕದ್ದು ಓದುತಿದ್ದ ವಿದ್ಯಾರ್ಥಿಗಳಿಂದ ಆವರಿಸಿದ ವಸತಿ ನಿಲಯ. ಸಮಯ ಅರಿವಾಗದೇ ಕಳೆಯುತ್ತಿದ್ದ ಸಮಯ. ಅರಿವಾಗದೇ ಮುಗಿದ ಪರೀಕ್ಷೆಗಳು. ಪ್ರವಾಸ ತೆರಳಿ ಸುಮಾರು ದಿನಗಳಾಗಿತ್ತು , ಪರೀಕ್ಷೆ ಮುಗಿಸಿದ ಖುಷಿಯಲ್ಲಿ, ಅದೇ ವೇಗದಲ್ಲಿ ಸ್ನೇಹಿತರೊಂದಿಗೆ ಹೊರಟ ಆ ಪಯಣ ರೋಮಾಂಚಕ ತಿರುವುಗಳನ್ನು ಕಂಡಿತು .

ನಾವು ಹೊರಟದ್ದು ಒಂದು ಜಾಗ , ತಲುಪಿದ್ದು ಇನ್ನೊಂದು, ನಂತರ ತಿರುವು ನೀಡಿದ್ದು ಯಾವುದೋ ಕಡೆಗೆ.

ಮೊದಲಿಗೆ ಹುಬ್ಬಳ್ಳಿಯತ್ತ ಸಾಗಿದ ನಮ್ಮ ಪ್ರಯಾಣ ಖುಷಿ , ತಮಾಷೆಗಳೊಂದಿಗೆ ದೂರದ ಪಯಣ ತಿಳಿಯದಂತೆ ನಡೆಯಿತು. ಅಂತೂ ಸಂಜೆ ೭ ಗಂಟೆಗೆ ಹುಬ್ಬಳ್ಳಿ ತಲುಪಿದೆವು. ಇಲ್ಲಿಯವರೆಗೂ ನಾವು ಹೊರಟಿದ್ದ ಸ್ಥಳದ ಬಗ್ಗೆ ನಿಮಗೂ ತಿಳಿದಿಲ್ಲ ಹಾಗೂ ನನ್ನ ಜೊತೆ ಹೊರಟಿದ್ದ ನನ್ನ ಸ್ನೇಹಿತರಿಗೂ ಮಾಹಿತಿ ಇರಲಿಲ್ಲ.

ನಾವು ಹೊರಟದ್ದು ಭಾರತ ದೇಶದ ಅತೀ ಎತ್ತರದ ಜಲಪಾತ , ದೂಧ್ ಸಾಗರ್ . ಟ್ರೆಕ್ಕಿಂಗ್ ಮುಖಾಂತರ ಹೋಗುವುದು ನಿಷೇಧ ಹಾಗೂ ಅಪರಾಧ. ಮುಂಜಾನೆ ೩ ಗಂಟೆಗೆ ರೈಲು ಕ್ಯಾಸ್ಟ್ಲೇ ರಾಕ್ ನಿಲ್ದಾಣ ತಲಪುತ್ತದೆ , ಅಲ್ಲಿಂದ ೧೩ ಕಿ.ಮೀ. ರೈಲು ಅಳಿಗಳ ಮೇಲೆ ನಡೆಯಬೇಕು . ಫೋನ್ , ಆಹಾರ ಹಾಗೂ ನೀರು ದೊರೆಯುವುದಿಲ್ಲ . ಸ್ವಲ್ಪ ಅಪಾಯಕಾರಿಯಾಗಿ ಇರುವುದು ಎಂದು ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಊಟ ಮಾಡುತ್ತಾ ತಿಳಿಸಿದೆನು .

ಸಂತೋಷ , ಆನಂದ ಮತ್ತು ಉತ್ಸಾಹದಿಂದ ತುಂಬಿದ್ದ ಅವರ ಮುಖಚಿತ್ರಗಳು ಭಯ , ನಿರಾಸೆ ಮತ್ತು ನಿರುತ್ಸಾಹಕ್ಕೆ ತಿರುಗಿದವು. ಹೇಗೋ ಧೈರ್ಯ ತುಂಬಿದೆ, ಊಟಾ , ನೀರು ಮತ್ತು ಅಗತ್ಯವಾದ ವಸ್ತುಗಳನ್ನು ಕೊಂಡೆವು. ಸಮಯ ರಾತ್ರಿ ೧೧:೩೦, ನಿಲ್ದಾಣಕ್ಕೆ ರೈಲಿನ ಆಗಮನವಾಯಿತು, ನಿಲ್ಲಲೂ ಜಾಗ ಸಾಲದು.

೩ ರೇ ಗಂಟೆಗಳ ಪಯಣ, ಎಂಬ ಧೈರ್ಯದಿಂದ ಮೀಸಲಾತಿ ವಿಭಾಗಕ್ಕೆ ಹೊರಟೆವು. ೧ ಸೀಟು ಖಾಲಿ ಇತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂಬಂತೆ ಅಷ್ಟೇ ಜಾಗದಲ್ಲಿ ೪ ಮಂದಿ ಕೂತು ಪ್ರಯಾಣ ಬೆಳೆಸಿದೆವು .

ಬೆಳಗಿನಜಾವ ೩:೩೦ ಸುಮಾರು , ರೈಲು ಕ್ಯಾಸ್ಟ್ಲೆ ರಾಕ್ ನಿಲ್ದಾಣಕ್ಕೆ ತಲುಪಿತು. ಸಂಪೂರ್ಣ ಕತ್ತಲು ,ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮಳೆಯಲ್ಲಿ ೧೪ ಕಿ ಮಿ ದೂರ , ೧೩ ಗುಹೆಗಳನ್ನು ದಾಟಿ ಹೋಗುವುದು ಅಪಾಯಕಾರಿ ಮತ್ತು ಅಸಾಧ್ಯ ಎಂದು ತಿಳಿದು , ನಮ್ಮ ಪ್ರಯಾಣವನ್ನು ಮುಂದುವರಿಸಿ ವಾಸ್ಕೋ ಡಿ ಗಾಮ ಕ್ಕೆ ತೆರಳಲು ನಿರ್ಧರಿಸಿದೆವು.

Dudh sagar

ಮನಸ್ಸಿಗೆ ಬೇಸರ , ಕಣ್ಣಾಂಚಿನಲ್ಲಿ ನೀರು. ಜಲಪಾತ ನೋಡುವ ಆಸೆ ಮುರಿದು , ಪ್ರಯಾಣ ಮುಂದುವರೆಸಿದೆವು. ೧೩ ಗುಹೆಗಳನ್ನು ದಾಟಿದ ನಂತರ ಸಿಗುವ ಜಲಪಾತ ನೋಡಲು ,ಗುಹೆಗಳ ಸಂಖ್ಯೆ ಎಣಿಸುತ್ತಾ ಬಾಕಿಲಿನಲ್ಲಿ ಕುಳಿತಿದ್ದನು . ಕತ್ತಲೆಯಲ್ಲಿ ಬೆಳ್ಳಗೆ ಇರುವ ದೊಡ್ಡ ಛತ್ರಿ ಆಕಾರದಲ್ಲಿ ಜಲಪಾತ ಕಾಣಿಸಿತು.

ಬೆಳಗ್ಗೆ ೬:೩೦ , ಗೋವಾ ತಲುಪಿದೆವು. ಅಲ್ಲಿಂದ ಪಣಜಿ ೬೦ ನಿಮಿಷಗಳ ಪ್ರಯಾಣ.

Ghule alone in million😍

ಹಿಂದಿನಸಲ ಭೇಟಿ ನೀಡಿದಾಗ ನೇಲೆಸಿದ್ದ ಲಾಡ್ಜ್ನಲ್ಲಿ ನೆಲೆಸಿದೇವು. ಅಲ್ಫ ಆಹಾರ ಸೇವಿಸಿ ಸಮುದ್ರದ ಕಡೆ ಹೆಜ್ಜೆಗಳು ಸಾಗಿದವು.

Macha❤️
@baga beach

ಬಿಸಿಲು , ಸಮುದ್ರದ ಉಪ್ಪು ೨ ಗಂಟೆಗಳಲ್ಲಿ ನಮ್ಮನ್ನು ಬಲಹೀನರನ್ನಾಗಿ ಮಾಡಿತು , ನಂತರ ಊಟಕ್ಕಾಗಿ ಪರದಾಡಿದೆವು . ಸಾಯಂಕಾಲ ಗೋವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು , ಮಾರನೆಯ ದಿನ ಹಿಂತಿರುಗಲು ಹೊರಟ ನಮ್ಮ ಪ್ರಯಾಣ ಹುಬ್ಬಳ್ಳಿಯಲ್ಲಿ ದಾವಣಗೆರೆ ಮುಖಾಂತರ ಚಿತ್ರದುರ್ಗಕ್ಕೆ ತಿರುಗಿತು .

ಇಂತಿ ನಿಮ್ಮ ಪಯಣಿಗ

– ತೇಜಸ್ ರೆಡ್ಡಿ .

VIJAYAPURA

I think it’s Feb 25, 2k19, evening 6pm, we four friends discussed about to visit VIJAYAPURA to attend classmate’s sister marriage. Finally a group of 11 girls & 4 boys decided to travel in Train. An unforgettable , funny incident happened that night

We had not made reservations 😂. Entered sleeper coach with high confidence that ticket collector won’t visit to us. 15 members in 5 seats made ourselves comfortable. It’s our bad luck , he entered the compartment. We were talking, I think he won’t catch us if we sit silently

My friend tried to confuse him , told 5 of girls to hide in washroom , but gave a twist , confused us and asked to pay 1500 rupees as a fine. We made an argument with him that we came here for the purpose of security to girls & more over told that we are students , can’t pay that much amount as a fine .As India is a corrupted country 😂 , he fixed his price to 600 rps finally .

Spent the whole night talking , Play PUBG. Reached Bijapur by 9 am . The first place to visit is GOL GUMBAZ

Gol Gumbaz

Forming a hand chain , reached for top view by passing slippery steps , some small cave like doors . All started to scream to enjoy the echo , enjoyed the place with truth & dare

Ibrahim roza

Approximately 38°c of temperature , even the air is scencing hot , sweat was ready to give bath , then with tired faces all decided to visit this

At 4 pm all faces were showing hunger in their expression , a delicious lunch was prepared in my friends home ,had tasty food and took some rest . That night we had to travel 60 kms from Bijapur to reach chadchan to attend marriage

The next day I visited some more places

Bara kaman
Gagan mahal

After completing these places, I spent most of my time in bus stand , that night I made an idea of booking tickets earlier so that all can sit comfortably to travel the whole night to reach bellary .

Final we made it ✊

For any crazy plans contact 7353276321, open for all, always

Thank you.

Coffee land of Karnataka – CHIKMAGALUR

Chikamagalur is a land of coffee & hill station in Karnataka. City attracts tourists for its western ghats

All this happened with a small talk with my friend. About any trip , the first place told was Chikmagalur.

Started our journey from davangere by train , a journey of 2 hours took a destination BIRUR. We made a private vehicle for our explore

As a part of our tradition all starts with a temple run. Here comes the first place

KALLATHGIRI FALLS

The Kallathigiri Falls, also known as the Kalhatti Falls, is a magnificent natural abode located 50 kilometres away from Chikmakagalur.The Kalhatti Falls is the first major waterfall around Chikmagalur, and easily the most distinctive one. Water drops from an overhanging ledge, allowing people to take showers beneath it. The falls contain the headwaters of the river Sharavathi

It forms 12 small waterfalls ,one above the other with slippery rocks . It’s almost difficult to reach 12th by trek

Origin of kallathgiri falls

Location – Kallathigiri Falls
Chikmagalur, Kallathgiri, Karnataka 577129
https://maps.google.com/?cid=13665012112971027995

Kemmangundi

It’s a green hillstation in tarikere taluk , scenes beautiful , green everywhere . It is 1435m above the sea level

Z Point is a wonderful trekking spot and one of the prime places to visit in Kemmanagundi. Z Point is a beautiful spot with deep valleys all around amidst thick green surroundings. The cool breeze on the peak mesmerizes visitors. It is one of the best short treks in Karnataka with beautiful views of nature and valleys.

Location – Kemmangundi
Karnataka 577129
https://maps.app.goo.gl/Be9H2Q1f8wChspFWA

Mullayangiri

Mullayanagiri is the highest peak in KarnatakaIndia.Mullayyanagiri is located at in the Chandra Dhrona Hill Ranges of the Western Ghats of Chikkamagaluru Taluk. With a height of 1,930 metres 

Experience the expiration of smoke with out cigar’s here ……

The peak gets its name from a small temple at the summit, which is dedicated to a sage “Mulappa swamy” who is believed to have meditated at the caves only a couple of feet below the summit. The caves are accessible and not very deep, they have a direct entrance to the garbagudi of the temple, which is now blocked by the temple priests.

A way back from mullayangiri on a road side , you wil get private vehicles. For a beautiful water falls you should pay 800 rupees per vehicle with 7 members limit . 4-5kms ride in forest, you can see a mesmerizing water falls – JHARI or DHABDABE FALLS

Best plan to explore chikamagalur in 2 days

1) start your first day morning with KALLATHGIRI falls. On a return way you can visit HEBBE falls. Spend sunset at KEMMANGUNDI.

2) experience foggy sunrise of 2nd day in MULLAYANGIRI . On a way return visit to JHARI falls. At last enjoy BABA BUDANGIRI

For more explanation – 7353276321

A small trek – JOGI MATTI

Jogimatti is a hill station and forest reserve in Chitradurga districtKarnataka, India. The reserve covers 10,048.97 hectares (38.7993 sq mi) in Chitradurga, Holalkere and Hiriyur taluks, 10 kilometres (6.2 mi) south of the city of Chitradurga. There is a century-old hilltop bungalow built by the British to house travellers, and a nearby temple dedicated to the local saintfor whom the hill station was named, with 155 steps

Jogimatti has 155 steps to reach peak after 10 kms of walk in forest . Trek wil be beautiful in mansoon season , it’s also called as ooty of Karnataka & 2nd Nandi hill

Jogimatti is the highest point in the district, at 3,803 feet (1,159 m) in elevation,[4] and one of the coolest places in the state. The vegetation is dry deciduous forest and scrub. It is rich in wildlife[5]and until the 1950s was tiger habitat, but is threatened by encroachment from farms and from nearby windmills, which endanger birds. The tigers and sloth bears are reported to have almost died out, and the medicinal plants found in the reserve are endangered

A beautiful hidden place

A waterfall called Himavatkedara or Himavatkedra has created a natural cave in which a Shiva lingam and idols of Veerabhadra and Basavanna have been placed. It’s on a way to jogimatti , contains a mud road , no vehicles go there , should walk around a kilometre you wil hear wrizling sound

Location – 1)Jogimatti Forest
Chitradurga, Karnataka 577524
080 3017 8146
https://maps.app.goo.gl/ucgwbnLVYmwicqmh6

2) ಹಿಮದಗಿರಿ ಜಲಪಾತ
Aadumaleshwara Rd, Chitradurga, Karnataka 577524
https://maps.app.goo.gl/wThWmvEyFgD8FzkT9

For more, approach – 7353276321

Follow , comment and share .

AGADI THOTA

AGADI THOTA is a one day hangout package. With an entry fee costs around 500 rupees , including tiffin , Breakfast, juices , lunch & evening snacks with all activities & entertainment.

Location –

Agadi Thota
Tadas – Hangal Road, Shiggaon Taluk, Kunnur, Karnataka 581193
078995 81866
https://maps.app.goo.gl/Hneaj4TNUhTAtxuWA

Way to go – many ways to reach that destination .main 2 routes r 1)davangere – haveri- shiggoun. 2) hubbali to AGADI THOTA

How i reached there ,my journey was very crazy ,wit more crazy friends .I started my journey from davangere early morning 5 by train , reached Haveri ,by bus to shiggoun ,and by private vehicle covered 15 kms distance ,walked 5 kms to reach the destination.

Things will happen there – wil wellcome u with making pooja ,keeping hat to u ,wil give a honey juice . Fruits & can self prepare the sugarcane juice u needed ,next u get is breakfast – a Rajasthani style dosa with sweet ghee . Many activities like boating , horse & camel riding , bullock cart , pot making and many ,after enjoying these all u get is lunch , atleast of 20 varities in ur plate ,after the full meal the entertainment time begins like magic show ,family game ,pippete show ,day ends with a snacks& tea

To get more details ring to 7353276321

Design a site like this with WordPress.com
Get started